ಕ್ರೀಡೆ

ಮೊದಲ T20ಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು : DK ಅಮೋಘ ಆಟ – ಕೆರಿಬಿಯನ್ನರಿಗೆ ಮತ್ತೆ ನಿರಾಶೆ

ವೆಸ್ಟ್ ವಿಂಡೀಸ್ ನ ಬ್ರಿಯಾನ್​ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಚುಟುಕು ಕದನದಲ್ಲಿ 68 ರನ್​​ಗಳಿಂದ ವೆಸ್ಟ್​​​​​ ಇಂಡೀಸ್​​​ ಅನ್ನು ಟೀ ಇಂಡಿಯಾ ಮಣಿಸಿದೆ. ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​​​​​​​​​​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ, ಉತ್ತಮ ಆರಂಭ ಪಡೆಯಿತು. ರೋಹಿತ್​​ ಶರ್ಮಾ – ಸೂರ್ಯ ಕುಮಾರ್​, ಮೊದಲ ವಿಕೆಟ್​ಗೆ 44 ರನ್​​ ಕಲೆ ಹಾಕಿದರು. ಆದ್ರೆ ಸೂರ್ಯ 24 ರನ್​ ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್​​​ ಅಯ್ಯರ್​​ ಡಕೌಟ್ ಆದ್ರೆ, ರಿಷಭ್​ ಪಂತ್​​​ 14 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಇವರಷ್ಟೆ ಅಲ್ಲ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಕೂಡ ಬೇಗನೇ ಔಟಾದರು.

ನಾಯಕ ರೋಹಿತ್ ಕುಸಿದ ತಂಡಕ್ಕೆ ಜೀವ ತುಂಬಿ ವಿಂಡೀಸ್​ ಬೌಲರ್​​​​ಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದಲ್ಲದೆ, ಅರ್ಧಶತಕವನ್ನೂ ಸಿಡಿಸಿದರು. 64 ರನ್ ​​ಗಳಿಸಿದ್ದಾಗ ಔಟಾದರು. ಇನ್ನು ಅಂತಿಮ ಹಂತದಲ್ಲಿ ದಿನೇಶ್​​ ಕಾರ್ತಿಕ್​ ಸ್ಫೋಟಕ ಬ್ಯಾಟಿಂಗ್​​ ನಡೆಸಿದ್ರು. ಅಜೇಯ 41 ರನ್​ ಸಿಡಿಸಿದ ಡಿಕೆ.

ಬೌಂಡರಿ – ಸಿಕ್ಸರ್​ಗಳ ಸುರಿಮಳೆಗೈದು ಫಿನಿಷಿಂಗ್​ ರೋಲ್​​​​​ ಅನ್ನ ಅದ್ಭುತವಾಗಿ ನಿಭಾಯಿಸಿದ್ರು. ಡಿಕೆಗೆ ಅಶ್ವಿನ್​ ಸಖತ್ತಾಗಿ ಸಾಥ್​ ನೀಡಿದ್ರು. ಈ ಜೋಡಿ 25 ಎಸೆತಗಳಲ್ಲಿ 52 ರನ್​ಗಳನ್ನು ಸೇರಿಸಿದರು.

ಅಂತಿಮವಾಗಿ ಭಾರತ 20 ಓವರ್​​​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 190 ರನ್​​​ಗಳ ಕಠಿಣ ಮೊತ್ತ ಪೇರಿಸಿತು. ವಿಂಡೀಸ್​ ಪರ ಅಲ್ಜಾರಿ ಜೋಸೆಫ್​​ 2 ವಿಕೆಟ್​, ಒಬೆಡ್​ ಮೆಕಾಯ್​, ಹೋಲ್ಡರ್​​, ಹೊಸೈನ್​, ಕಿಮೋ ಪೌಲ್​ ತಲಾ 1 ವಿಕೆಟ್​ ಪಡೆದ್ರು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್​​​​, ಟಿ20 ಸ್ಪೆಷಲಿಸ್ಟ್​​ಗಳನ್ನೇ ಹೊಂದಿದ್ರೂ, ಭಾರತೀಯ ಬೌಲರ್​​ಗಳ ಮುಂದೆ ಮಂಕಾಯ್ತು.

ಆರಂಭದಲ್ಲೇ ಕೈಲ್​ ಮೇಯರ್ಸ್​, ಜೇಸನ್​ ಹೋಲ್ಡರ್ ವಿಕೆಟ್ ಕಳೆದುಕೊಂಡು ಕೊನೆಯಲ್ಲಿ ಟೀ ಇಂಡಿಯಾ 68 ರನ್ ಗಳ ಜಯ ಲಭಿಸಿತು.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024