ಪೆಟ್ರೋಲ್ ಬಂಕ್ನಲ್ಲಿ ಡಿಸೇಲ್ ಬರಲು ವಾಹನಕ್ಕೆ ನೀರು ತುಂಬಿದ ಘಟನೆ ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್ನ ಹೆಚ್.ಪಿ.ಬಂಕ್ನಲ್ಲಿ ನಡೆದಿದೆ.
ಬಂಕ್ ಸಿಬ್ಬಂದಿ ಡೀಸೆಲ್ ಬದಲು ನೀರು ತುಂಬಿ ಗ್ರಾಹಕರಿಗೆ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಂಕ್ ಸಿಬ್ಬಂದಿ ಲಾರಿಗೆ ಡೀಸೆಲ್ ಬದಲು ನೀರು ಹಾಕಿ ಲಾರಿ ಚಾಲಕನಿಗೆ ಯಾಮಾರಿಸಿದ್ದರು. ಅನುಮಾನಗೊಂಡ ಲಾರಿ ಚಾಲಕ ಬಕೆಟ್ಗೆ ಡಿಸೇಲ್ ತುಂಬಿ ಪರೀಕ್ಷಿಸಿದ ಸಂದರ್ಭದಲ್ಲಿ ತಾನು ಯಾಮಾರಿರುವುದು ಗೊತ್ತಾಗಿದ್ದು, ಕೂಡಲೇ ಚಾಲಕ ಸಿಬ್ಬಂದಿಗೆ ವಂಚನೆ ಬಗ್ಗೆ ಪ್ರಶ್ನಿಸಿದ್ದಾರೆ.
ಆದ್ರೆ ಸಿಬ್ಬಂದಿ ಇದೆಲ್ಲಾ ಕಾಮನ್ ಎಂದು ಉಡಾಫೆಯಾಗಿ ಉತ್ತರಿಸಿ, ಚಾಲಕನಿಗೆ ಧಮ್ಕಿ ಕೂಡ ಹಾಕಿದ್ದಾರಂತೆ.
ಗಾಡಿಗೆ ಹಾಕಿಸಿಕೊಂಡ ಡೀಸೆಲ್ನಲ್ಲಿ ಶೇಕಡಾ 90.ರಷ್ಟು ನೀರಿದ್ರೆ, ಡೀಸೆಲ್ ಸಿಗೋದು ಕೇವಲ 10% ಮಾತ್ರ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರೋ ವೇಳೆಯಲ್ಲಿ ಬಂಕ್ ನವರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಚಾಲಕ ಆರೋಪ ಮಾಡಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ