ಅಂಕಿತಾ ಭಂಡಾರಿ ಪೌರಿ ಗರ್ವಾಲ್ ಎಂಬ ಈ ಯುವತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ . ಬಂಧಿತರ ಪೈಕಿ ಓರ್ವ ಬಿಜೆಪಿ ನಾಯಕ, ಮಾಜಿ ಸಚಿವರ ಪುತ್ರ ಪುಲ್ಕಿತ್ ಆರ್ಯನೂ ಸೇರಿದ್ದಾನೆ.ಇದನ್ನು ಓದಿ –PFI ಮುಖಂಡನ ಮನೆಯಲ್ಲಿ ಸಾವರ್ಕರ್ ಬುಕ್ ಪತ್ತೆ: ಶಿವಮೊಗ್ಗದಲ್ಲಿ 19 ಲಕ್ಷ ರು ಪತ್ತೆ
ಉತ್ತರಾಖಂಡ್ನ ಭೋಜ್ಪುರ್ ಬಳಿಯ ರೆಸಾರ್ಟ್ವೊಂದರಲ್ಲಿ ಅಂಕಿತಾ ಭಂಡಾರಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದಳು. ಸೆಪ್ಟೆಂಬರ್ 19 ರಂದು ಅಂಕಿತಾ ಭಂಡಾರಿ (ಸೋಮವಾರದಿಂದ) ದಿಢೀರ್ ನಾಪತ್ತೆಯಾಗಿದ್ದಳು ನಂತರ ಅಂಕಿತಾ ಭಂಡಾರಿ ಉತ್ತರಾಖಂಡ್ನ ಪೌರಿ ಗರ್ವಾಲ್ ಬಳಿ ಶವವಾಗಿ ಪತ್ತೆಗಿದ್ದಾಳೆ.
ಯುವತಿಯನ್ನು ಕೊಂದು ಆಕೆಯ ಶವವನ್ನು ಕಾಲುವೆಗೆ ಎಸಗಿರುವುದಾಗಿ ಆರೋಪಿಗಳೇ ತಪ್ಪೊಪ್ಪಿಕೊಂಡಿದ್ದಾರೆ.
ಬಿಜೆಪಿ ನಾಯಕ, ಮಾಜಿ ಸಚಿವ ವಿನೋದ್ ಆರ್ಯರ ಪುತ್ರ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್, ಹಾಗೂ ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು