ಕಲಾವತಿ ಪ್ರಕಾಶ್.
ಬೆಂಗಳೂರು.
ಬಾಗದೇಶ,ಬಾಗಡಿಗ ನಾಡೆಂದು
ಸಾರಿ ಸಾರಿ ಹೇಳುತಿವೆ ಶಾಸನಗಳು
ಬಾದಾಮಿ ಐಹೊಳೆ ಪಟ್ಟದಕಲ್ಲು
ಮೇಣಬಸದಿ ಮಹಾಗುಡ್ಡಗಳು
ಬಾಗಲಕೋಟೆ ಬಾದಾಮಿ ಚಾಲುಕ್ಯರಾಳಿದ ನಾಡು
ಶಿಲ್ಪ ಕಲೆ ವಾಸ್ತು ಶಿಲ್ಪದ ಈ ಬೀಡು
ಕಾವೇರಿಯಿಂದ ನರ್ಮದೆಯವರೆಗಿದ್ದಂಥ
ವಿಶಾಲ ಸಾಮ್ರಾಜ್ಯ ನೀ ನೋಡು
ಗುಹಾಂತರ ದೇವಾಲಯ ಜೈನ ಬಸದಿ
ಬೌದ್ಧ ನೆಲೆಗಳಿವೆ ಇಲ್ಲೂ
ನಂದ ಕದಂಬರ ಚಾಲುಕ್ಯ ಗುಪ್ತರ
ಪಟ್ಟಾಭಿಷೇಕದ ಪಟ್ಟದಕಲ್ಲು
ಬನಶಂಕರಿ ಗುಡಿ ಬಾದಾಮಿ
ಶೈವ ವೈಷ್ಣವ ಜೈನರ ಬಸದಿಗಳ
ಶರಣ ಸಂಪ್ರದಾಯದ ಕೂಡಲಸಂಗಮ
ವಿಶ್ವ ಗುರು ಬಸವಣ್ಣನವರು ಐಕ್ಯವಾದ ಸ್ಥಳ
ಕನ್ನಡ ಕವಿ ರತ್ನ “ರನ್ನರ” ಹುಟ್ಟೂರು
ಬಳಗಲಿ ಕೂಡ ಬಾಗಲಕೋಟೆ
ಸಮಕಾಲಿನ ಸಾಹಿತ್ಯದ ಸಾಹಿತಿಗಳನೇಕರಿಗೆ
ಜನ್ಮದೂರೂ ಈ ಪೇಟೆ
ಸಾಹಿತ್ಯ ಕ್ಷೇತ್ರದಲ್ಲಿ ಸತ್ಯಾನಂದ ಪತ್ರೋಡರು
ಕಾದಂಬರಿಗಾರ್ತಿ ರೇಖಾ ಕಾಖಂಡಕಿ
ಪ್ರಕಾಶ್ ಖಾಡೆ,ಹಿರೇಮಠರು
ಜಾನಪದದ ವೀರೇಂದ್ರ ಬಡಿಗೇರು
ಭಾರತೀಯ ಸೇನೆಗೆ ಮೊದಲಿಗೆ ಸೇರಿಕೊಂಡಿತು
ಶ್ವಾನ ಅದು ಬಾಗಲಕೋಟೆ ಮುಧೋಳ್ ತಳಿ
ಪುನರ್ವಸತಿ ನಗರಗಳಲ್ಲಿ ಮಾದರಿ
ನಗರವೇ ಬಾಗಲಕೋಟೆ ನೀ ತಿಳಿ
ಸಂಸ್ಕೃತಿಯ ರಾಯಭಾರಿ ಇಳಕಲ್ ಸೀರಿ
ಗುಳೇದಗುಡ್ಡದ ಕುಪ್ಪಸದ ಚಂದದ ಖಣ
ರಬಕವಿ ಬನವಾಸಿ ಕೈಮಗ್ಗ, ಅಮಿನಗಡದ
ಕರದಂಟು ತಿನ್ನಲು ಸಿಕ್ಕೀತು ಇದ್ದರೆ ಮಾತ್ರ ಋಣ
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment