Karnataka

ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ

ಮಹಿಷಪುರ ಶಬ್ದದಿಂದ ಮೈಸೂರು ಹೆಸರು ಬಂದಿದೆ
ಗಂಗರು ಚಾಲುಕ್ಯರು ಚೋಳರು ಹೊಯ್ಸಳರಲ್ಲದೆ
ವಿಜಯನಗರದ ಅರಸರು ಮೈಸೂರು ಒಡೆಯರು
ಹೈದರಾಲಿ ಟಿಪ್ಪು ಸುಲ್ತಾನ ಬ್ರಿಟಿಷರು ಆಳಿದರು

ಯದುರಾಯರಿಂದ ಸ್ಥಾಪಿತ ಮೈಸೂರು ಸಂಸ್ಥಾನ
ಹತ್ತು ಜನ ಚಾಮರಾಜರು ನಾಲ್ವರು ಕೃಷ್ಣರಾಜರು
ಮಹಾ ಪರಾಕ್ರಮಿ ಕಂಠೀರವ ನರಸಿಂಹರಾಜರು
ಇಪ್ಪತ್ತೈದು ರಾಜರಿಂದ ಆಳಿದ ಒಡೆಯರ ಮೈಸೂರು

ಪಿರಿಯಾಪಟ್ಟಣ ಹುಣಸೂರು ಕೃಷ್ಣರಾಜನಗರ
ಹೆಗ್ಗಡದೇವನಕೋಟೆ ನಂಜನಗೂಡು ಮೈಸೂರು
ತಿರುಮಕೂಡಲನರಸಿಪುರ ಸರಗೂರು ಸಾಲಿಗ್ರಾಮ
ಎಂಬ ಒಂಭತ್ತು ತಾಲ್ಲೂಕುಗಳು ಇರುವ ಮೈಸೂರು

ಮೈಸೂರು ಪಾಕ್ ಮೈಸೂರು ಸಿಲ್ಕ್ ಸೀರೆ ಗಳಿಗಲ್ಲದೆ
ಮೈಸೂರು ಮಲ್ಲಿಗೆ ಮೈಸೂರು ವೀಳ್ಯದೆಲೆಗಳು
ಮೈಸೂರು ಪೇಟ ಅಗರ್ ಬತ್ತಿ ಮೈಸೂರು ಇಂಕ್
ಮೈಸೂರು ಸಾಂಪ್ರದಾಯಿಕ ಚಿತ್ರಪಟಕ್ಕೆ ಪ್ರಸಿದ್ಧ ನಗರ

ಮೈಸೂರು ವಿಶ್ವವಿದ್ಯಾನಿಲಯ ರಂಗಾಯಣಗಳು
ಜಗದ್ವಿಖ್ಯಾತ ಮೈಸೂರು ದಸರಾ ನವರಾತ್ರಿ ಉತ್ಸವ
ಡೊಳ್ಳು ಪೂಜಾ ಕುಣಿತ ಕಂಸಾಳೆ ಸೋಮನ ಕುಣಿತ
ವಾಸ್ತು ಶಿಲ್ಪ ಸಂಗೀತ ಚಿತ್ರಕಲೆ ಮೈಸೂರಿನ ವಿಶೇಷತೆ

ಕಪಿಲಾನದಿ ಕಬಿನಿಜಲಾಶಯ ಚುಂಚನಕಟ್ಟೆ ಜಲಪಾತ
ಮೈಸೂರು ಮಲ್ಲಿಗೆ ತಂಬಾಕು ಶುಂಠಿ ಎಳ್ಳು ಕಬ್ಬು ರಾಗಿ
ದ್ವಿದಳ ಧಾನ್ಯಗಳು ಮುಸುಕಿನ ಜೋಳ ಇಲ್ಲಿಯ ಬೆಳೆ
ಮೈಸೂರು ಪಾಕು ಮಸಾಲೆ ದೋಸೆ ಪ್ರಸಿದ್ಧ ತಿಂಡಿಗಳು

ಜಗನ್ಮೋಹನ ಅರಮನೆ ಕುಕ್ಕರಹಳ್ಳಿ ಕಾರಂಜಿ ಕೆರೆ
ರೇಲ್ವೆ ಮ್ಯುಸಿಯಮ್ ಸೆಂಟ್ ಫಿಲೋಮಿನಾಸ್ ಚರ್ಚ್
ಲಲಿತ್ ಮಹಲ್ ಶ್ರೀ ಚಾಮರಾಜೇಂದ್ರ ಮೃಗಾಲಯ
ಚಾಮುಂಡಿ ಬೆಟ್ಟ ಫ್ಯಾಂಟಸಿ ಪಾರ್ಕ್ ನೋಡೊ ತಾಣ

ನಂಜನಗೂಡಿನ ಶ್ರೀಕಂಠೇಶ್ವರ ತಲಕಾಡಿನ ಗುಡಿ
ಪಂಚಲಿಂಗ ದರ್ಶನ ಸೋಮನಾಥ ಪುರದಲ್ಲಿಯ
ಚನ್ನಕೇಶವ ದೇವಾಲಯ ಅಮರ ಶಿಲ್ಪಿ ಜಕಣಾಚಾರಿ
ಕೈಯಿಂದ ಕೆತ್ತಿದ ಅದ್ಭುತವಾದ ಶಿಲ್ಪಕಲೆಯ ನೆಲೆಬೀಡು

ಎಂ ವೆಂಕಟಕೃಷ್ಣಯ್ಯನವರು ಆರ್ ತಾತಾಚಾರ್ಯರು
ಟಿ ಪಿ ಕೈಲಾಸಂ ಜಾನಪದ ತಜ್ಞ ಸಿ ಪಿ ಕೃಷ್ಣ ಕುಮಾರ್
ಎಂ ವಿ ಸೀತಾರಾಮಯ್ಯ ಎಸ್ ಶ್ರೀಕಂಠ ಶಾಸ್ತ್ರಿಗಳು
ಹೊಸಗನ್ನಡದ ಲೇಖಕಿ ತಿರುಮಲಾಂಬ ಸಾಹಿತಿಗಳು

ಕಲಾವತಿ ಪ್ರಕಾಶ್ ಬೆಂಗಳೂರು (ಜಿಲ್ಲೆ ೩೦)

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024

ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ

ಬೆಂಗಳೂರು:ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More

May 10, 2024

ವಿಚಾರವಾದಿ ದಾಭೋಲ್ಕರ್ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More

May 10, 2024