ಮಹಿಷಪುರ ಶಬ್ದದಿಂದ ಮೈಸೂರು ಹೆಸರು ಬಂದಿದೆ
ಗಂಗರು ಚಾಲುಕ್ಯರು ಚೋಳರು ಹೊಯ್ಸಳರಲ್ಲದೆ
ವಿಜಯನಗರದ ಅರಸರು ಮೈಸೂರು ಒಡೆಯರು
ಹೈದರಾಲಿ ಟಿಪ್ಪು ಸುಲ್ತಾನ ಬ್ರಿಟಿಷರು ಆಳಿದರು
ಯದುರಾಯರಿಂದ ಸ್ಥಾಪಿತ ಮೈಸೂರು ಸಂಸ್ಥಾನ
ಹತ್ತು ಜನ ಚಾಮರಾಜರು ನಾಲ್ವರು ಕೃಷ್ಣರಾಜರು
ಮಹಾ ಪರಾಕ್ರಮಿ ಕಂಠೀರವ ನರಸಿಂಹರಾಜರು
ಇಪ್ಪತ್ತೈದು ರಾಜರಿಂದ ಆಳಿದ ಒಡೆಯರ ಮೈಸೂರು
ಪಿರಿಯಾಪಟ್ಟಣ ಹುಣಸೂರು ಕೃಷ್ಣರಾಜನಗರ
ಹೆಗ್ಗಡದೇವನಕೋಟೆ ನಂಜನಗೂಡು ಮೈಸೂರು
ತಿರುಮಕೂಡಲನರಸಿಪುರ ಸರಗೂರು ಸಾಲಿಗ್ರಾಮ
ಎಂಬ ಒಂಭತ್ತು ತಾಲ್ಲೂಕುಗಳು ಇರುವ ಮೈಸೂರು
ಮೈಸೂರು ಪಾಕ್ ಮೈಸೂರು ಸಿಲ್ಕ್ ಸೀರೆ ಗಳಿಗಲ್ಲದೆ
ಮೈಸೂರು ಮಲ್ಲಿಗೆ ಮೈಸೂರು ವೀಳ್ಯದೆಲೆಗಳು
ಮೈಸೂರು ಪೇಟ ಅಗರ್ ಬತ್ತಿ ಮೈಸೂರು ಇಂಕ್
ಮೈಸೂರು ಸಾಂಪ್ರದಾಯಿಕ ಚಿತ್ರಪಟಕ್ಕೆ ಪ್ರಸಿದ್ಧ ನಗರ
ಮೈಸೂರು ವಿಶ್ವವಿದ್ಯಾನಿಲಯ ರಂಗಾಯಣಗಳು
ಜಗದ್ವಿಖ್ಯಾತ ಮೈಸೂರು ದಸರಾ ನವರಾತ್ರಿ ಉತ್ಸವ
ಡೊಳ್ಳು ಪೂಜಾ ಕುಣಿತ ಕಂಸಾಳೆ ಸೋಮನ ಕುಣಿತ
ವಾಸ್ತು ಶಿಲ್ಪ ಸಂಗೀತ ಚಿತ್ರಕಲೆ ಮೈಸೂರಿನ ವಿಶೇಷತೆ
ಕಪಿಲಾನದಿ ಕಬಿನಿಜಲಾಶಯ ಚುಂಚನಕಟ್ಟೆ ಜಲಪಾತ
ಮೈಸೂರು ಮಲ್ಲಿಗೆ ತಂಬಾಕು ಶುಂಠಿ ಎಳ್ಳು ಕಬ್ಬು ರಾಗಿ
ದ್ವಿದಳ ಧಾನ್ಯಗಳು ಮುಸುಕಿನ ಜೋಳ ಇಲ್ಲಿಯ ಬೆಳೆ
ಮೈಸೂರು ಪಾಕು ಮಸಾಲೆ ದೋಸೆ ಪ್ರಸಿದ್ಧ ತಿಂಡಿಗಳು
ಜಗನ್ಮೋಹನ ಅರಮನೆ ಕುಕ್ಕರಹಳ್ಳಿ ಕಾರಂಜಿ ಕೆರೆ
ರೇಲ್ವೆ ಮ್ಯುಸಿಯಮ್ ಸೆಂಟ್ ಫಿಲೋಮಿನಾಸ್ ಚರ್ಚ್
ಲಲಿತ್ ಮಹಲ್ ಶ್ರೀ ಚಾಮರಾಜೇಂದ್ರ ಮೃಗಾಲಯ
ಚಾಮುಂಡಿ ಬೆಟ್ಟ ಫ್ಯಾಂಟಸಿ ಪಾರ್ಕ್ ನೋಡೊ ತಾಣ
ನಂಜನಗೂಡಿನ ಶ್ರೀಕಂಠೇಶ್ವರ ತಲಕಾಡಿನ ಗುಡಿ
ಪಂಚಲಿಂಗ ದರ್ಶನ ಸೋಮನಾಥ ಪುರದಲ್ಲಿಯ
ಚನ್ನಕೇಶವ ದೇವಾಲಯ ಅಮರ ಶಿಲ್ಪಿ ಜಕಣಾಚಾರಿ
ಕೈಯಿಂದ ಕೆತ್ತಿದ ಅದ್ಭುತವಾದ ಶಿಲ್ಪಕಲೆಯ ನೆಲೆಬೀಡು
ಎಂ ವೆಂಕಟಕೃಷ್ಣಯ್ಯನವರು ಆರ್ ತಾತಾಚಾರ್ಯರು
ಟಿ ಪಿ ಕೈಲಾಸಂ ಜಾನಪದ ತಜ್ಞ ಸಿ ಪಿ ಕೃಷ್ಣ ಕುಮಾರ್
ಎಂ ವಿ ಸೀತಾರಾಮಯ್ಯ ಎಸ್ ಶ್ರೀಕಂಠ ಶಾಸ್ತ್ರಿಗಳು
ಹೊಸಗನ್ನಡದ ಲೇಖಕಿ ತಿರುಮಲಾಂಬ ಸಾಹಿತಿಗಳು
ಕಲಾವತಿ ಪ್ರಕಾಶ್ ಬೆಂಗಳೂರು (ಜಿಲ್ಲೆ ೩೦)
ನಮ್ಮ ಪೋಲಿಸರು ಸಮರ್ಥರಿದ್ದಾರೆ ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More
ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್ಎಸ್ಎಲ್ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More
ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More
ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More
ಬೆಂಗಳೂರು:ಪೆನ್ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More
ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More
This website uses cookies.
Leave a Comment