ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ – ಪ್ರಾಂಶುಪಾಲರ ಸಸ್ಪೆಂಡ್ ಗೆ ಡಿಸಿ ಕ್ರಮ ?

Team Newsnap
1 Min Read

ಸ್ಕೂಲ್ ಕ್ಯಾಂಪಸ್ ಒಳಗೆ ಬಂದ 9 ನೇ ತರಗತಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕು ತಂಗಳಗೆರೆ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದೆ.

ವಸತಿ ಶಾಲೆಯ ಸಿಸಿ ಟಿವಿಯಲ್ಲಿ ವಿದ್ಯಾರ್ಥಿ ಕಿಶೋರ್ ಕ್ಯಾಂಪಸ್ ಒಳಗೆ ಪ್ರವೇಶ ನಿಗೂಢವಾಗಿ ನಾಪತ್ತೆಯಾಗಿರುವ 9ನೇ ತರಗತಿ ವಿದ್ಯಾರ್ಥಿ. ಮೈಸೂರು ದಸರಾ ಉದ್ಘಾಟನೆ – ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ

ನಿಗೂಢವಾಗಿ ನಾಪತ್ತೆಯಾದ ವಿದ್ಯಾರ್ಥಿ ಕಿಶೋರ್ನಾ ಪತ್ತೆಯಾಗಿ 20 ದಿನದ ನಂತರ ಈ ಘಟನೆ ಬೆಳಕಿಗೆ ಬಂದಿದೆ

ಆಗಸ್ಟ್ 10 ರಂದು ಮಗನನ್ನು ಶಾಲೆಗೆ ಬಿಟ್ಟು ಬಂದಿದ್ದ ತಂದೆ ಈರೇಗೌಡ.
ಆಗಸ್ಟ್ 29ರಂದು ಗೌರಿ ಗಣೇಶ ಹಬ್ಬಕ್ಕೆ ಮಗನನ್ನು ಕರೆದುಕೊಂಡು ಬರಲು ಶಾಲೆಗೆ ಹೋದ ತಂದೆಗೆ ಶಾಕ್ ಆಗಿದೆ .
ನಿಮ್ಮ ಮಗ 20 ದಿನದಿಂದ ಶಾಲೆಗೆ ಬಂದಿಲ್ಲ ಎಂದ ಪ್ರಾಂಶುಪಾಲ ಹೇಳಿದ ನಂತರ
ಸಿಸಿ ಟಿವಿ ಪರಿಶೀಲನೆ ಬಳಿಕ ಶಿಕ್ಷಕರು ಬೆಚ್ಚಿ ಬಿದ್ದಿದ್ದಾರೆ ಅಲ್ದೇ 20 ದಿನಗಳಿಂದ ವಿದ್ಯಾರ್ಥಿ ಶಾಲೆಗೆ ಬಾರದಿದ್ದರೂ
ಪೋಷಕರಿಗೆ ಈ ವಿಷಯವನ್ನು ಮುಖ್ಯ ಶಿಕ್ಷಕರು ತಿಳಿಸಿಲ್ಲ. ಬೆಂಗಳೂರು ,ಮಂಡ್ಯ ಮೈಸೂರು ಸೇರಿ ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ

ಬಾಲಕನ ನಿಗೂಢವಾದ ನಾಪತ್ತೆಯಿಂದ ಕಂಗಾಲಾದ ಕುಟುಂಬ. ಕೆರಗೋಡು ಪೋಲಿಸರಿಗೆ ದೂರು ನೀಡಿದ್ದಾರೆ
ಮತ್ತೊಂದೆಡೆ ಪೊಲೀಸರಿಗೂ ಸವಾಲಾದ ವಿದ್ಯಾರ್ಥಿ ನಾಪತ್ತೆ ಪ್ರಕರಣ.

ಪ್ರಾಂಶುಪಾಲರ ಸಸ್ಪೆಂಡ್ ಡಿಸಿ ಕ್ರಮ :

ಶಾಲೆಯ ಪ್ರಾಂಶುಪಾಲರ ನಿರ್ಲಕ್ಷ್ಯತೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಈ ಕುರಿತಂತೆ
ವರದಿ ಪಡೆದು ಸಸ್ಪೆಂಡ್ ಮಾಡಲು ಡಿಸಿ ನಿರ್ಧಾರ ಮಾಡಿದ್ದಾರೆಂದು ಹೇಳಲಾಗಿದೆ.

Share This Article
Leave a comment