ದೇಶದ ಗಡಿಗಳನ್ನು ಬಂದ್ ಮಾಡಿ, ಹೊರಗಿಂದ ಬರುವವರ ಮೇಲೆ ಕಣ್ಣಿಡಿ ಎಂದು ರಕ್ಷಣಾ ಇಲಾಖೆ ಮುಖ್ಯಸ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಾಗರಿಕರ ಮೇಲೆ ಐಎಸ್ಐ ಉಗ್ರರು ಸಾಲು ಸಾಲು ದಾಳಿ ನಡೆಸಿದ್ದಾರೆ. ಇದು ಆತಂಕದ ಸಂಗತಿ ಎಂದಿದ್ದಾರೆ
ಅಫ್ಘಾನಿಸ್ತಾನದಲ್ಲಿ ಈಗ ಏನು ನಡೆಯುತ್ತಿದೆಯೋ ಅದು ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ನಡೆಯಬಹುದು. ಇದಕ್ಕೆ ನಾವು ಈಗಲೇ ಸಿದ್ಧವಾಗಬೇಕಿದೆ. ನಮ್ಮ ಗಡಿಗಳನ್ನು ಸೀಲ್ ಮಾಡಿ, ಉಸ್ತುವಾರಿಕೆ ಈಗ ಬಹುಮುಖ್ಯವಾಗಿದೆ. ಹೊರಗಿನಿಂದ ಯಾರು ಬರುತ್ತಿದ್ದಾರೆ ಅನ್ನೋದರ ಮೇಲೆ ನಾವೀಗ ಎಚ್ಚರಿಕೆಯ ಕಣ್ಣಿಡಬೇಕಿದೆ ಎಂದು ಹೇಳಿದ್ದಾರೆ.