October 18, 2024

Newsnap Kannada

The World at your finger tips!

Karnataka , transfer , tehsildar

ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವ ಬೆದರಿಕೆ – ಸಾಪ್ಟ್ ವೇರ್ ಇಂಜಿನಿಯರ್ ಬಂಧನ

Spread the love

ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ನಿನ್ನೆ ಸಂಜೆ ಮೂರು ಬಾರಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಸಾಪ್ಟ್ ವೇರ್ ಇಂಜಿನಿಯರ್ ನನ್ನು ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯ ಲ್ಯಾಂಡ್​ಲೈನ್​ ನಂಬರ್​ಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.ಇದನ್ನು ಓದಿ –ಬೆಂಗಳೂರಿನಲ್ಲಿ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ : ಕರ್ತವ್ಯ ಲೋಪ – ಪಿಎಸ್‌ಐ ಸೇರಿ ಐವರು ಸಿಬ್ಬಂದಿ ಅಮಾನತು

ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಸಿಡಿಯುತ್ತದೆ ಎಂದು ಹೇಳಿ ಕರೆ ಕಟ್ ಮಾಡಿದ್ದನಂತೆ. ಫೋನ್ ಕಾಲ್ ಮಾಹಿತಿ ಆಧರಿಸಿ ಒಂದು ವಿಶೇಷ ತಂಡ ವಿಧಾನಸೌಧವನ್ನು ಪರಿಶೀಲನೆ ನಡೆಸಿತ್ತು.

ಕೇಂದ್ರ ವಿಭಾಗ ಡಿಸಿಪಿ ಸೇರಿದಂತೆ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿತ್ತು. ಆದರೆ ಬಾಂಬ್​ ಇಟ್ಟಿರುವ ಬಗ್ಗೆ ಯಾವುದೆ ಸಾಕ್ಷ್ಯ ಲಭ್ಯವಾಗದ ಹಿನ್ನೆಲೆಯಲ್ಲಿ, ಸುಳ್ಳು ಕರೆ ಎಂದು ಪೊಲೀಸರು ಭಾವಿಸಿದ್ದರು.


ಕೊನೆಗೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಪ್ರಶಾಂತ್​ನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಬಂಧಿತ ಆರೋಪಿ ಸಾಫ್ಟ್​ವೇರ್ ಇಂಜಿನಿಯರ್ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!