February 27, 2026

Newsnap Kannada

The World at your finger tips!

rakth chandana

ರಕ್ತ ಚಂದನ ಸ್ಮಗ್ಲಿಂಗ್ ಕೇಸ್; ಮೂವರು ನಗರ ಪೊಲೀಸ್​​​​ ಪೇದೆಗಳಿಗಾಗಿ ಹುಡುಕಾಟ

Spread the love

ಖಾಕಿಯೇ ಖಾಕಿಗೆ ಖೆಡ್ಡಾ ತೋಡಿದ್ದಾರೆ ಬೆಂಗಳೂರು ಗ್ರಾಮಂತರ ಪೊಲೀಸರೇ ಇಲ್ಲಿ ಹೀರೋಗಳು. ವಿಲನ್ ಸ್ಥಾನದಲ್ಲಿ ನಿಂತವರೂ ಪೊಲೀಸರೇ. ವಿಚಿತ್ರ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಬೆಂಗಳೂರು ನಗರದ ಮೂವರು ಪೊಲೀಸ್​ ಪೇದೆಗಳು
ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸರು ರಕ್ತ ಚಂದನ ಸ್ಮಗ್ಲರ್ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆಯಲ್ಲಿ
ರೋಚಕ ಸತ್ಯವೊಂದು ಬೆಳಕಿಗೆ ಬಂದಿದೆ, ಈ ರಕ್ತ ಚಂದನ ಸ್ಮಗ್ಲಿಂಗ್​ನಲ್ಲಿ ಮೂವರು ಪೊಲೀಸರೇ ಪ್ರಮುಖ ಆರೋಪಿಗಳಾಗಿದ್ದಾರೆ.

ಈಗ ಒಬ್ಬ ಡಿವೈಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದ ತಂಡದಿಂದ ಆರೋಪಿ ಪೊಲೀಸ್​ ಕಾನ್ಸ್​​ಟೇಬಲ್​ಗಳಿಗಾಗಿ ತೀವ್ರ ಹುಡುಕಾಟ​ ನಡೆಯುತ್ತಿದೆ.

ಇವರ ಹಿಂದೆ ಯಾರಾದರೂ ಹಿರಿಯ ಅಧಿಕಾರಿಗಳು ಇದ್ದಾರಾ? ಅನ್ನೋ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನು  ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರಕ್ತಚಂದನ ಅಕ್ರಮ ಮಾರಾಟ ಮಾಡಿರುವ ಶಂಕೆಯೂ ಇದೆ.

error: Content is protected !!