ಕರ್ನಾಟಕದ ಬಸ್​ಗೆ ಮಸಿ ಬಳಿದ MES ಪುಂಡರು ಚಾಲಕನೊಂದಿಗೆ ಅಮಾನವೀಯ ವತ೯ನೆ

Team Newsnap
0 Min Read

ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರ ಹಾವಳಿ ಮತ್ತೆ ಮುಂದುವರಿದಿದೆ.

ಕಲ್ಯಾಣ ಕರ್ನಾಟಕದ ಸಾರಿಗೆ ಬಸ್ ತಡೆದು ಕಪ್ಪು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ.

ಮುಂಬೈನಿಂದ ಕಲಬುರಗಿಗೆ ಬರುತ್ತಿದ್ದ ಸಾರಿಗೆ ಬಸ್ ತಡೆದು. ಬಳಿಕ ಬಸ್ಸಿನ ಮುಂಭಾಗ ತಮ್ಮ ಧ್ವಜವನ್ನು ಇಡಲು ಯತ್ನಿಸಿದ್ದಾರೆ.

ನಂತರ ಬಸ್ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ನೀಡಿ ಜೈ ಶಿವಾಜಿ ಅಂತಾ ಬಲವಂತವಾಗಿ ಘೋಷಣೆ ಹಾಕಿಸಿದ್ದಾರೆ.

ಪುಂಡರ ಈ ಪುಂಡಾಟಿಕೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

Share This Article
Leave a comment