ಕಣ್ಣೀರೂ ಸುರಿಸಿದ ಮಂಡ್ಯ ಬಿಜೆಪಿ ಅಭ್ಯಥಿ೯ ಬೂಕಹಳ್ಳಿ ಮಂಜು

Team Newsnap
1 Min Read

ವಿಧಾನ ಪರಿಷತ್ ಅಭ್ಯರ್ಥಿ ಬೂಕಹಳ್ಳಿ ಮಂಜು ಕಣ್ಣೀರು ಹಾಕಿ ನಮ್ಮ ಪಕ್ಷವು ಯಾರಜೊತೆಮೈತ್ರಿ ಮಾಡಿಕೊಂಡಿಲ್ಲ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಜಿಲ್ಲೆಯ ಮತದಾರರು ನನ್ನ ಕೈ ಬಿಡಲ್ಲ ಎಂದು ಹೇಳಿದರು

ಸುದ್ದಿಗಾರರ ಜೊತ ಮಾತನಾಡಿದ ಬೂಕಳ್ಳಿ ಮಂಜು ನಾನು ಒಂದು ವರ್ಷದಿಂದ ಚುನಾವಣೆ ಸಿದ್ಧತೆ ಮಾಡಿಕೊಂಡು ಬಂದಿದ್ದೇನೆ ಎಂದಿದ್ದಾರೆ ಮಂಡ್ಯದಲ್ಲಿ ಬಿಜೆಪಿ ನೆಲೆಗಟ್ಟುವುದು ಇಷ್ಟ ಇಲ್ಲದೇ ಷಡ್ಯಂತ್ರ ಮಾಡುತ್ತಿದ್ದಾರೆಆದರೆ ನನ್ನ ಹೋರಾಟ ನಾನು ಕೈಬಿಡುವುದಿಲ್ಲ ಎಂದರು

ಒಂದು ವರ್ಷ ನನ್ನ ಹೋರಾಟ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಈಗ ನಾನು ಏನು ಹೇಳುವುದಿಲ್ಲ. ಕೊನೆ ಕ್ಷಣದ ಹೋರಾಟ ಮಾಡುತ್ತೇನೆ. ಯಾರು ಹೀಗೆ ಮಾಡ್ತಿದ್ದಾರೆ ಅನ್ನೋದು ದೇವರೊಬ್ಬನಿಗೇ ಗೊತ್ತು ಎಂದಿದ್ದಾರೆ.

ಜಿಲ್ಲೆಯಲ್ಲಿ ಮತದಾನ ಆರಂಭಕ್ಕೂ ಬಿಜೆಪಿ ಅಭ್ಯರ್ಥಿಗೆ ಬಿಜೆಪಿಯವರೇ ಮೋಸ ಮಾಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದದ್ದು, ಬಿಜೆಪಿ ಮೈತ್ರಿಯಾಗಿದೆ ಎನ್ನುವುದು ಗಾಳಿ ಸುದ್ದಿಯಾಗಿದೆ. ನಿನ್ನೆ ಸಂಜೆ 4 ಗಂಟೆವರಿಗೂ ಎಲ್ಲವೂ ಚೆನ್ನಾಗಿಯಿತ್ತು. 4 ಗಂಟೆ ಬಳಿಕೆ ಎಲ್ಲವೂ ಬದಲಾವಣೆಯಾಗಿದೆ ಎಂದರು

Share This Article
Leave a comment