ಸಚಿವರ ಪುತ್ರ ನಿಶಾಂತ್ ನಿಗೆ ಬ್ಲ್ಯಾಕ್ ಮೇಲ್ ಮಾಡಿ ಬಂಧನ ದಲ್ಲಿರುವ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಪುತ್ರ ರಾಹುಲ್ ಭಟ್ ವಿಚಾರಣೆ ವೇಳೆ ಸಾಕಷ್ಟು ಟ್ವಿಸ್ಟ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ವಿರುದ್ಧ ನಕಲಿ ವಿಡಿಯೋ ಒಂದನ್ನು ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣ ಐವರನ್ನು ಬಂಧಿಸಲಾಗಿದೆ.
ಆಡುಗೋಡಿಯ ಸೈಬರ್ ಕ್ರೈಂ ಪೊಲೀಸರ ಮಾಹಿತಿಯಂತೆ ಈ ಪ್ರಕರಣದಲ್ಲಿ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಪುತ್ರ ರಾಹುಲ್ ಭಟ್ ಕೈವಾಡ ಇರುವುದು ಸ್ಪಷ್ಟವಾಗಿದೆ.
ನಿಶಾಂತ್ ಸೋಮಶೇಖರ್ ನಿಗೆ ಕಳಿಸಲಾದ ಬೆದರಿಕೆಯ ಮೆಸೆಜ್ ಬಂದಿದ್ದು ಇಂಡಿ ಕಾಂಗ್ರೆಸ್ ಶಾಸಕ ಶವಂತ್ ರಾಯ್ ಪಾಟೀಲ್ ಪುತ್ರಿಯ ಹೆಸರಿನಲ್ಲಿ ಸಿಮ್ ಇರುವುದು ಪೊಲೀಸರಿಗೆ ಗೊತ್ತಾಗಿ ತನಿಖಾ ತಂಡ ಇಂಡಿಗೂ ಹೋಗತ್ತದೆ.
ಆದರೆ ಶಾಸಕರ ಪುತ್ರಿ ಕಳೆದ ಒಂದು ವಷ೯ದ ಹಿಂದೆಯೇ ಲಂಡನ್ ಗೆ ಹೋಗಿದ್ದಾಳೆ. ಹೋಗುವ ಮುನ್ನ ಆಕೆ ಮುಂಬೈ ಗೆಳೆಯ ರಾಕೇಶ್ ಎಂಬಾತನಿಗೆ ಕೊಟ್ಟಿರುತ್ತಾಳೆ. ಪೋಲಿಸರು ಮುಂಬೈಗೂ ಹೋಗಿ ರಾಕೇಶ್ ವಿಚಾರಿಸಿದರೆ ಸಿಮ್ ಆತನ ಬಳಿ ಇರುವುದಿಲ್ಲ.
ಅದು ಬೆಂಗಳೂರಿನ ರಾಹುಲ್ ಭಟ್ ನ ಬಳಿ ಇರುವುದು ಪತ್ತೆಯಾಗುತ್ತದೆ. ಆ ಹುಡುಗಿಯ ಹೆಸರಿಲ್ಲಿದ್ದ ಸಿಮ್ ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
- ‘ವೈಸ್ ಅಡ್ಮಿರಲ್’ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕ
- ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
- ಕುಮಾರಸ್ವಾಮಿ ಗೆಲ್ಲಿಸಿ, ಕೇಂದ್ರ ಮಂತ್ರಿ ಸ್ಥಾನ ಸಾಧ್ಯತೆ : ಬಿಜೆಪಿ ಶಾಸಕ ಸುರೇಶ್ ಕುಮಾರ್
- ಮಂಡ್ಯದಲ್ಲಿ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ದೇವೇಗೌಡರಿಂದ ಡಿ ಸಿ ಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ