Politics

ರಾಜ್ಯಸಭೆ ಚುನಾವಣೆ : ಲೇಹರ್ ಸಿಂಗ್ ಗೆಲುವಿನ ಬಿಜೆಪಿ ಲೆಕ್ಕಾಚಾರ ಹೇಗೆ ಹಾಕಿದೆ : ವಿವರ ನೋಡಿ

ರಾಜ್ಯಸಭೆ ಬಿಜೆಪಿ ಮೂರನೇ ಅಭ್ಯರ್ಥಿ ಲೇಹರ್ ಸಿಂಗ್ ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗಿದೆ, ಈ ಬಗ್ಗೆ ಬಿಜೆಪಿ ಭರ್ಜರಿ ಲೆಕ್ಕಾಚಾರ ಹಾಕಿದೆ. ಸಂಖ್ಯೆ 19 ರಲ್ಲಿ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿನ ಗೌಪ್ಯತೆ ಅಡಗಿದೆ.

ಸಂಖ್ಯೆ 19ರ ಆಧಾರದಲ್ಲಿ ಮೂರನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ರಣತಂತ್ರ ರೂಪಿಸಿದೆ. ಲೆಕ್ಕಾಚಾರದ ಗುಟ್ಟೇನು ? :

1) ಬಿಜೆಪಿ ಬಳಿ ಇರುವ ಶಾಸಕರ ಸಂಖ್ಯೆ 122. ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ತಲಾ 45 ಶಾಸಕರಿಂದ ಮೊದಲ ಪ್ರಾಶಸ್ತ್ಯ ಮತ ಹಾಕಿಸಲು ತೀರ್ಮಾನ ಮಾಡಲಾಗಿದೆ

2) ಒಬ್ಬ ಶಾಸಕನ 1 ಮತ 100 ಮತಗಳ ಮೌಲ್ಯಕ್ಕೆ ಸಮ. ಈ‌ ಲೆಕ್ಕಾಚಾರದಲ್ಲಿ 45 ಮತಗಳು ಅಂದರೆ 4,500 ಮತಗಳ ಮೌಲ್ಯ ಆಗಲಿದೆ. ಆದರೆ ಒಬ್ಬ ರಾಜ್ಯಸಭೆ ಅಭ್ಯರ್ಥಿ ಗೆಲ್ಲುವುದಕ್ಕೆ ಕರಾರುವಕ್ಕಾಗಿ ಬೇಕಾಗುವ ಮತಗಳ ಮೌಲ್ಯ 4,481.

3) ಮೊದಲೆರಡು ಅಭ್ಯರ್ಥಿಗಳಿಗೆ ಚಲಾವಣೆಯಾದ ಒಟ್ಟು 4,500 ಮತ ಮೌಲ್ಯಗಳಲ್ಲಿ 4,481 ಕಳೆದರೆ ಉಳಿಯುವು ಸಂಖ್ಯೆ 19. ಅಲ್ಲಿಗೆ ನಿರ್ಮಲಾ ಸೀತಾರಾಮನ್ 4,481 ಮತ್ತು ಜಗ್ಗೇಶ್‌ ಅವರಿಗೆ 4,481 ಮತ ಮೌಲ್ಯಗಳು ಸಿಕ್ಕಿದ ಮೇಲೆ ಅವರಿಬ್ಬರ ಗೆಲುವು ಖಚಿತ.

4) ಇವರಿಬ್ಬರಿಂದ ಉಳಿಯುವ 19+19 ಅಂದರೆ 38 ಮತಗಳು ಲೆಹರ್ ಸಿಂಗ್ ಗೆಲ್ಲಿಸಲು ಸಹಕಾರಿ ಆಗಲಿವೆ ಎನ್ನುವುದು ಸಧ್ಯದ ಲೆಕ್ಕಾಚಾರ

5) ಬಿಜೆಪಿಯ ಬಳಿ 32 ಉಳಿಕೆ ಮತಗಳು ಈಗಾಗಲೇ ಇದೆ. 32 ಮತಗಳು ಅಂದ್ರೆ ಮತಗಳ‌ ಮೌಲ್ಯ 3,200. 3,200ಕ್ಕೆ 38 ಕೂಡಿಸಿದರೆ 3,238 ಆಗಲಿದೆ.

6) ಜೆಡಿಎಸ್ ಅಭ್ಯರ್ಥಿಗೆ 32 ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ 25 ಮೊದಲ ಪ್ರಾಶಸ್ತ್ಯದ ಮತಗಳು ಸಿಕ್ಕಿರುತ್ತವೆ.

ಇದನ್ನು ಓದಿ –ರೆಪೋ ದರ ಹೆಚ್ಚಳ- ಗೃಹ , ವೈಯಕ್ತಿಕ ಸಾಲದ ಬಡ್ಡಿ ದರ ಶೇ.4.90ಕ್ಕೆ ಏರಿಕೆ, EMI ಕೂಡ ದುಬಾರಿ

7) ಮತಗಳ ಎಣಿಕೆಯಲ್ಲಿ ಕನಿಷ್ಟ ಮತಗಳನ್ನು ಪಡೆದಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಎಣಿಕೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ.

8) ಆಗ ಕಣದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉಳಿದಿರುತ್ತಾರೆ. ಲೆಹರ್ ಸಿಂಗ್‌ಗೆ 3,238 ಕುಪೇಂದ್ರ ರೆಡ್ಡಿಗೆ 3,200 ಮತಗಳ ಮೌಲ್ಯ ಸಿಕ್ಕಿರುತ್ತದೆ. ಮತಗಳ ಮೌಲ್ಯದಲ್ಲಿ ಲೆಹರ್ ಸಿಂಗ್ ಮುಂದಿರುತ್ತಾರೆ. ಆಗ ಸಹಜವಾಗಿ ಹೆಚ್ಚು ಮತಗಳ ಮೌಲ್ಯಗಳ ಪಡೆದ ಲೆಹರ್ ಸಿಂಗ್ ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ.

Team Newsnap
Leave a Comment
Share
Published by
Team Newsnap

Recent Posts

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024