ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಶಾಸಕರ ಪೈಕಿ 194 ಜನ ಕೋಟ್ಯಾಧಿಪತಿಗಳು. 163 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.
2015 ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಮನಿಸಿದ ಪ್ರಕಾರ 243 ಶಾಸಕರಲ್ಲಿ 142 (ಶೇ.58) ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.
123 (ಶೇಕಡಾ 51) ವಿಜೇತ ಅಭ್ಯರ್ಥಿಗಳು ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.
ಗೆದ್ದಿರುವ 19 ಶಾಸಕರುಗಳು ತಮ್ಮ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್ -302) ಪ್ರಕರಣಗಳನ್ನು ಘೋಷಿಸಿದ್ದಾರೆ. ಬಿಹಾರದ 31 ವಿಜೇತ ಶಾಸಕರುಗಳು ಕೊಲೆ ಯತ್ನ ಪ್ರಕರಣಗಳನ್ನು ಘೋಷಿಸಿದ್ದರೆ (ಐಪಿಸಿ ಸೆಕ್ಷನ್ -307), 8 ವಿಜೇತ ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಚುನಾವಣಾ ಆಯೋಗಕ್ಕೆ ಘೋಷಿಸಿದ್ದಾರೆ.
ಆರ್ಜೆಡಿ 54 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ಪಕ್ಷಗಳಲ್ಲಿ, ಆರ್ಜೆಡಿಯಿಂದ ಗೆದ್ದ 74 ಅಭ್ಯರ್ಥಿಗಳಲ್ಲಿ 54 (ಶೇ.73), ಬಿಜೆಪಿಯಿಂದ ಗೆದ್ದ 73 ಅಭ್ಯರ್ಥಿಗಳಲ್ಲಿ 47 (ಶೇ.64), ಜೆಡಿಯುನಿಂದ ಗೆದ್ದ 43 ಅಭ್ಯರ್ಥಿಗಳಲ್ಲಿ 20 (ಶೇ.47), ಕಾಂಗ್ರೆಸ್ ನಿಂದ ಗೆದ್ದ 19 ಅಭ್ಯರ್ಥಿಗಳಲ್ಲಿ 16 (ಶೇ.84), ಸಿಪಿಐ (ಎಂಎಲ್)(ಎಲ್) ನಿಂದ ಗೆದ್ದ 12 ಅಭ್ಯರ್ಥಿಗಳಲ್ಲಿ 10 (ಶೇ.83) ಮತ್ತು ಎಐಎಂಐಎಂನಿಂದ ಗೆದ್ದ 5 ಅಭ್ಯರ್ಥಿಗಳಲ್ಲಿ 5 (ಶೇ.100) ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಅಫಿಡವಿಟ್ ಗಳಲ್ಲಿ ಘೋಷಿಸಿದ್ದಾರೆ.
ಆರ್ಜೆಡಿಯಿಂದ ಗೆದ್ದ 74 ಅಭ್ಯರ್ಥಿಗಳಲ್ಲಿ 44 (ಶೇ.60), ಬಿಜೆಪಿಯಿಂದ ಗೆದ್ದ 73 ಅಭ್ಯರ್ಥಿಗಳಲ್ಲಿ 35 (ಶೇ.48), ಜೆಡಿಯುನಿಂದ ಗೆದ್ದ 43 ಅಭ್ಯರ್ಥಿಗಳಲ್ಲಿ 11 (ಶೇ.26), ಕಾಂಗ್ರೆಸ್ ನಿಂದ ಗೆದ್ದ 19 ಅಭ್ಯರ್ಥಿಗಳಲ್ಲಿ 11 (ಶೇ.58), ಸಿಪಿಐ (ಎಂಎಲ್) (ಎಲ್) ನಿಂದ ಗೆದ್ದ 12 ಅಭ್ಯರ್ಥಿಗಳಲ್ಲಿ 8 (ಶೇ.67) ಮತ್ತು ಎಐಎಂಐಎಂನಿಂದ ಗೆದ್ದ 5 ಅಭ್ಯರ್ಥಿಗಳಲ್ಲಿ 5 (ಶೇ.100) ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ತಮ್ಮ ಅಫಿಡವಿಟ್ಗಳಲ್ಲಿ ಘೋಷಿಸಿದ್ದಾರೆ.
241 ಶಾಸಕರುಗಳಲ್ಲಿ 194 ಜನ ಕೋಟ್ಯಾಧಿಪತಿಗಳು
241 ಶಾಸಕರುಗಳಲ್ಲಿ 194 (ಶೇ.81) ಜನ ಕೋಟ್ಯಾಧಿಪತಿಗಳಾಗಿದ್ದರೆ. 2015 ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ವಿಶ್ಲೇಷಿಸಿದ 243 ಶಾಸಕರಲ್ಲಿ 162 (ಶೇಕ.67) ಶಾಸಕರು ಕೋಟ್ಯಾಧಿಪತಿಗಳಾಗಿದ್ದರು.
ಪ್ರಮುಖ ಪಕ್ಷಗಳಾದ ಬಿಜೆಪಿಯಿಂದ 73 ಶಾಸಕರ ಪೈಕಿ 65 (ಶೇ.89), ಆರ್ಜೆಡಿಯ 74 ಶಾಸಕರ ಪೈಕಿ 64 (ಶೇ.87), ಜೆಡಿಯುನ 43 ಶಾಸಕರ ಪೈಕಿ 38 (ಶೇ.88) ಮತ್ತು ಕಾಂಗ್ರೆಸ್ ನ 19 ಶಾಸಕರ ಪೈಕಿ 14 (ಶೇ.74) ವಿಜೇತ ಅಭ್ಯರ್ಥಿಗಳು ಕೋಟ್ಯಾಧೀಶ್ವರರಾಗಿದ್ದಾರೆ.
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
This website uses cookies.
Leave a Comment