ಮುನ್ನಡೆಯ ತಿರುವು:
ಮೊದಲ ಆರು ಸುತ್ತುಗಳಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆಯಲ್ಲಿದ್ದರು. ಆದರೆ, ಚನ್ನಪಟ್ಟಣ ನಗರದ ಇವಿಎಂ ತೆರೆಯುತ್ತಿದ್ದಂತೆಯೇ ಯೋಗೇಶ್ವರ್ ಭಾರೀ ಮುನ್ನಡೆ ಗಳಿಸಿದರು ಮತ್ತು ಅದನ್ನು ಕೊನೆವರೆಗೂ ಕಾಪಾಡಿಕೊಂಡು ಜಯ ಸಾಧಿಸಿದರು.
ಯೋಗೇಶ್ವರ್ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ, ಈ ಅನುಕಂಪ ಮತ್ತು ಬೆಂಬಲ ಮತಗಳಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಬಿದ್ದಿತು. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಚುನಾವಣೆಗೆ ಮೊದಲೇ ಜನತಾ ದರ್ಶನ ನಡೆಸಿ ಕ್ಷೇತ್ರದಲ್ಲಿ ಸಕ್ರಿಯ ಪ್ರಚಾರ ನಡೆಸಿದ್ದರು.
ಕಳೆದ ಚುನಾವಣೆಯಲ್ಲಿ ಯೋಗೇಶ್ವರ್ಗೆ ಸಿಕ್ಕಿಲ್ಲದ ಅಲ್ಪಸಂಖ್ಯಾತ ಮತಗಳು ಈ ಬಾರಿ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಡೆ ತಿರುಗಿದವು. ಚನ್ನಪಟ್ಟಣ ಕೆರೆಗೆ ನೀರು ತುಂಬಿಸುವ ಮೂಲಕ ಯೋಗೇಶ್ವರ್ ಜನತೆಯ ಮೆಚ್ಚುಗೆ ಗಳಿಸಿದ್ದು, ಈ ಮೂಲಕ ಮತದಾರರನ್ನು ಆಕರ್ಷಿಸಿದರು.ಇದನ್ನು ಓದಿ –ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ಸಚಿವ ಜಮೀರ್ ಅಹಮದ್ ಅವರ ವಿವಾದಾತ್ಮಕ ಹೇಳಿಕೆಗಳು ಕಾಂಗ್ರೆಸ್ಗೆ ಹೆಚ್ಚು ಹಾನಿ ಮಾಡದಿದ್ದರೂ, ಯೋಗೇಶ್ವರ್ ಅವರ ಅಭಿವೃದ್ಧಿ ಕೇಂದ್ರಿತ ಇಮೇಜ್ ಮತ್ತು ಜನಸಂಪರ್ಕವು ಗೆಲುವಿನ ಪ್ರಮುಖ ಕಾರಣವಾಗಿವೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು