ಹಾನಗಲ್ ಉಪಚುನಾವಣಾ ಅಖಾಡದ ಮತ ಏಣಿಕೆ ವೇಳೆ ನಡೆಯುತ್ತಿದ್ದಂತೆ ಶ್ರೀನಿವಾಸ್ ಮಾನೆ ಪರ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಟ್ಟಿಂಗ್ ಕಟ್ಟಿದ್ದಾನೆ.
ಹಾನಗಲ್ ತಾಲೂಕಿನ
ಮಾರನಬೀಡ ಗ್ರಾಮದ ಹನುಮಂತಪ್ಪ ಎಂಬಾತ ತಮ್ಮ ಒಂದು ಎಕರೆ ಜಮೀನು ಪಣಕ್ಕಿಟ್ಟಿದ್ದಾನೆ. ಶ್ರೀನಿವಾಸ್ ಮಾನೆ ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆಯಿಂದ ಬೆಟ್ಟಿಂಗ್ ಆಡಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾನೆ. ಕೇವಲ ಜಮೀನು ಮಾತ್ರವಲ್ಲ ಪ್ರತ್ಯೇಕವಾಗಿ 15 ಸಾವಿರ ರೂಪಾಯಿ ನಗದು ಕೂಡ ಬೆಟ್ಟಿಂಗ್ಗೆ ಹಾಕಿದ್ದಾನೆ ಎನ್ನಲಾಗಿದೆ.
ಇದೀಗ ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಂಚ ಮುಂದಿದ್ದಾರೆ. , ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಕ್ಟೋಬರ್ 30 ರಂದು
ಚುನಾವಣೆ ನಡೆದಿತ್ತು.