ಬೆಂಗಳೂರಿನಲ್ಲಿ ಅಪಾಟ್೯ ಮೆಂಟ್ ವೊಂದಕ್ಕೆ ವಿದ್ಯುತ್ ಕಡಿತಗೊಳಿಸದಿರಲು ಮಾಲೀಕರಿಂದ 5 ಲಕ್ಷ ರು ಲಂಚ ಸ್ವೀಕರಿಸುವ ಮುನ್ನ ಬೆಸ್ಕಾಂ ಎಇಇ ನಾಯಕ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆ್ಯಂಟನಿ ಎಂಬುವವರು ನೀಡಿದ ದೂರಿನ ಮೇರೆಗೆ ದಾಳಿ ಮಾಡಿ ಎಸಿಬಿ ಅಧಿಕಾರಿಗಳು ವಿದ್ಯುತ್ ಕಡಿತ ಮಾಡದಿರಲು 9 ಲಕ್ಷ ರು ಗಳಿಗೆ ಎಇಇ ಬೇಡಿಕೆ ಇಟ್ಟಿದ್ದರು. ಆ್ಯಂಟನಿ ಮುಂಗಡವಾಗಿ 5 ಲಕ್ಷ ರು ನೀಡುವ ವೇಳೆ ಅಧಿಕಾರಿಯನ್ನು ಬಂಧಿಸಿ 5 ಲಕ್ಷ ರುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.