ಬೆಳಗಾವಿ ಉದ್ವಿಗ್ನ: ಡಿಕೆಶಿ ಬೆಂಗಾವಲು ಕಾರ್​ ಮೇಲೆ ಚಪ್ಪಲಿ ಎಸೆತ- ಜಾರಕಿಹೊಳಿ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

Team Newsnap
1 Min Read

ಚುನಾವಣಾ ಪ್ರಚಾರಕ್ಕಾಗಿ ಬೆಳಗಾವಿಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಾವಲು ವಾಹನದ ಮೇಲೆ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಡಿಕೆಶಿ ವಾಹನವನ್ನು ಅಡ್ಡಗಟ್ಟುವ ಪ್ರಯತ್ನ ನಡೆಯಿತು. ಈ ವೇಳೆ ಲಘು ಲಾಠಿಚಾರ್ಜ್ ಕೂಡ ನಡೆದಿದೆ.

dk j

ಸಾಂಬ್ರಾ ವಿಮಾನದ ಮುಂಭಾಗದಲ್ಲಿ ಸೇರಿದ್ದ ಜಾರಕಿಹೊಳಿ ಅಭಿಮಾನಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ವಿಮಾನ ನಿಲ್ದಾಣದಿಂದ ಹೊರಬಂದ ಡಿಕೆಶಿ ಬೆಂಗಾವಲು ವಾಹನಗಳ ಜೊತೆಗೆ ಪ್ರಚಾರಕ್ಕೆ ತೆರಳಿದರು. ಈ ವೇಳೆ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಡಿಕೆಎಸ್​ ಅವರ ವಾಹನದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದರು.

ಸ್ಥಳದಲ್ಲಿದ್ದ ಪೊಲೀಸರು ಮುತ್ತಿಗೆಗೆ ಮುಂದಾದ ರಮೇಶ್ ಜಾರಕಿಹೊಳಿ ಅಭಿಮಾನಿಗಳನ್ನ ತಡೆದರು. ಕಾರ್ ಅಡ್ಡಗಟ್ಟಿ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ನಡೆಸಿದರು.

ಈನಡುವೆ ಉದ್ರಕ್ತ ಗುಂಪು ಬೆಂಗಾವಲು ಸಿಬ್ಬಂದಿಯಾಗಿರಯ ಗನ್ ಮ್ಯಾನ್ ಒಬ್ಬರನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದೆ. ನಂತರ ಆ ಸಿಬ್ಬಂದಿ ಬೈಕ್ ನಲ್ಲಿ ಪ್ರಾಣ ರಕ್ಷಣೆ ಮಾಡಿಕೊಂಡರು.

ಬೆಳಗಾವಿಯಲ್ಲಿ ಪರಿಸ್ಥಿತಿ ತುಂಬಾ ಗಂಭೀರ ವಾಗಿದೆ. ಪೊಲೀಸ್ ಬಂದೋಬಸ್ತ್ ನಲ್ಲಿ ಡಿಕೆ ಶಿವಕುಮಾರ್ ‌ಖಾಸಗಿ ಹೋಟೆಲ್ ಗೆ ತೆರಳಿದರು. ನಾಳೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಪಾಲ್ಗೊಳ್ಳಲಿದ್ದಾರೆ.

Share This Article
Leave a comment