ಕೊಪ್ಪಳದ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸವರಾಜ (ಬಸಣ್ಣ) ಅಮರಪ್ಪ ಕರಡಿ (60) ಸೋಮವಾರ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
ಕೊಪ್ಪಳ ತಾಲ್ಲೂಕಿನ ಟಣಕನಲ್ ನಿವಾಸಿ ಬಸವರಾಜ ಕರಡಿ ಸಮೀಪದ ಹನುಮನಳ್ಳಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಸುದ್ದಿ ತಿಳಿಯುತ್ತಲೇ ನವದೆಹಲಿಯಿಂದ ಟಣಕನಕಲ್ ಗ್ರಾಮಕ್ಕೆ ಆಗಮಿಸಿದರು.