ಬೈಕ್ ಅಪಘಾತ: ಬೆಂಗಳೂರಿನ ಟೆಕ್ಕಿ ತುಮಕೂರಿನಲ್ಲಿ ಸಾವು

Team Newsnap
1 Min Read
Banglore biker spot dead in Tumkur #thenewsnap #shcoking_news #bike_accident #biker #bengaluru #latestnews #death #tumkur #mysuru #mandya_news #Kannada_news

ಬೈಕ್ ರೈಡಿಂಗ್ ಮಾಡುವಾಗ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸೂರಜ್‌(27) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಣಿಗಲ್‌ ತಾಲ್ಲೂಕಿನ ಗವಿಮಠದ ಬಳಿ ಭಾನುವಾರ ಬೆಳಿಗ್ಗೆ ಜರುಗಿದೆ

WhatsApp Image 2022 06 26 at 11.14.30 AM

ಬೆಂಗಳೂರಿನ ಸೂರಜ್‌ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು.ವಾರಾಂತ್ಯದ ರಜೆಯ ಪ್ರಯುಕ್ತ ಸ್ನೇಹಿತ ಅಜಯ್‌ ಜತೆ ಬೈಕ್ ರೈಡಿಂಗ್‌ ಮಾಡುವಾಗ ಅಪಘಾತ ಸಂಭವಿಸಿದೆ.ಇದನ್ನು ಓದಿ -ಬೆಳಗಾವಿ ಬಳಿ ಕ್ರೂಸರ್ ನಾಲೆಗೆ ಉರುಳಿ 9 ಮಂದಿ ದುರ್ಮರಣ : ಮೂವರ ಸ್ಥಿತಿ ಗಂಭೀರ 

ಇಬ್ಬರು ಡುಕಾಟಿ ಬೈಕ್‌ಗಳಲ್ಲಿ ಬೆಂಗಳೂರಿನಿಂದ ಹೊರಟಿದ್ದರು, ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ವಾಹನವೊಂದಕ್ಕೆ ತಗುಲಿ, ನಿಯಂತ್ರಣ ತಪ್ಪಿದ ಸೂರಜ್ ಗವಿಮಠದ ಬಳಿಯ ರಾಷ್ಟ್ರೀಯ ಹೆದ್ದಾರಿ 72ರ ಸೇತುವೆಯ ಮೇಲಿಂದ ಉರುಳಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ದ್ವಿಚಕ್ರ ವಾಹನ ನುಜ್ಜುಗುಜ್ಜಾಗಿದೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share This Article
Leave a comment