ಬಂಡೇ ಸ್ವಾಮೀ ಬರೆದಿದ್ದು 6 ಪುಟಗಳ ಡೆತ್‍ನೋಟ್ – ಮೂವರು ಮಹಿಳೆಯರು : 20 ಮಂದಿಯ ವಿಚಾರಣೆ

Team Newsnap
1 Min Read
Swamiji black mailed ! honeytrap possibility? ಯುವತಿಯ C D ಇಟ್ಕೊಂಡು ಬಸವಲಿಂಗ ಸ್ವಾಮಿಗೆ ಮತ್ತೊಬ್ಬ ಸ್ವಾಮಿ ಬ್ಲಾಕ್ ಮೇಲ್ - ಹನಿಟ್ರ್ಯಾಪ್ ಶಂಕೆ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೇ ಮಠದ ಬಸವಲಿಂಗ ಸ್ವಾಮೀಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಹಿತಿ ಬಹಿರಂಗವಾಗಿದೆ. ಈ ಸ್ವಾಮೀಜಿ ಬರೆದ 6 ಪುಟಗಳ ಡೆತ್‍ನೋಟ್ ಪತ್ತೆ ಆಗಿರುವ ಬಗ್ಗೆ ಸ್ವತಃ ರಾಮನಗರ ಎಸ್‍ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.

ಲಿವಿಂಗ್ ಟುಗೆದರ್ ಗೆ ಕಂಟಕ : ರಾಜ್ಯ ಮಹಿಳಾ ಆಯೋಗಕ್ಕೆ ದೂರುಗಳ ಸುರಿಮಳೆ

ಡೆತ್‍ನೋಟ್, ವೀಡಿಯೋ ಸೇರಿ ಎಲ್ಲಾ ಸಾಕ್ಷಿ ಸಂಗ್ರಹಿಸಿ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಇನ್ನೊಂದು ಡೆತ್‍ನೋಟ್ ಇದೆ ಎಂದು ನಮಗೆ ತಿಳಿದುಬಂದಿದೆ ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಮೂವರು ಮಹಿಳೆಯರು ಇದ್ದಾರೆ ಎಂಬ ಶಂಕೆ ಇದೆ . ಯಾರೇ ಭಾಗಿಯಾಗಿದ್ದರೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಈವರೆಗಿನ ವಿಚಾರಣೆಯಲ್ಲಿ ಯಾರನ್ನೂ ಸಹ ಬಂಧಿಸಿಲ್ಲ. ಅಲ್ಲದೇ ಮಾಗಡಿ ಠಾಣೆಗೆ ಈ ಕೇಸ್ ವರ್ಗಾವಣೆ ಆಗಿದೆ. ಮಾಗಡಿ ಇನ್ಸ್‌ಪೆಕ್ಟರ್‌ ರಿಂದ ತನಿಖೆ ನಡೆಯುತ್ತಿದೆ. ತಾಂತ್ರಿಕ ಸಾಕ್ಷಿ ಕೂಡಾ ಕಲೆ ಹಾಕಲಾಗುತ್ತಿದೆ. ಮಠದ ಸಿಬ್ಬಂದಿ ಹಾಗೂ ಸ್ವಾಮೀಗಳ ಆಪ್ತರ ಮೊಬೈಲ್ ಫೋನ್‌ ಕೂಡಾ ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಹೇಳಿದರು.

Share This Article
Leave a comment