ರೆಸ್ಟೋರೆಂಟ್ ನಡೆಸಲು ಗುತ್ತಿಗೆ ಪಡೆದಿದ್ದ ಕೃತಿಕಾ ಗೌಡ ಮೇಲೆ ಸಯ್ಯದ್ ರಿಯಾಜ್ ಎಂಬಾತ ಹಲ್ಲೆ ನಡೆಸಿದ್ದಾರೆಂಬ ಆರೋಪ
ನಲಪಾಡ್ಗೆ ಸೇರಿರುವ ಈ ರೆಸ್ಟೋರೆಂಟನ್ನ ಕೃತಿಕಾ ಗೌಡ, ಮೂರು ವರ್ಷಗಳವರೆಗೆ ನಡೆಸಲು ಗುತ್ತಿಗೆ ಪಡೆದುಕೊಂಡಿದ್ದರು.
ಇದೀಗ ಹೋಟೆಲ್ನ ಉಸ್ತುವಾರಿ ನೋಡಿಕೊಳ್ತಿದ್ದ ಸಯ್ಯದ್ ರಿಯಾಜ್ ಹಾಗೂ ಮತ್ತಿತರರು ಹೋಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಅಂತಾ ಕೃತಿಕಾ ಗೌಡ ಆರೋಪಿಸಿದ್ದಾರೆ.
ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾನು ನಲಪಾಡ್ ಅವರ ಹೋಟೆಲ್ ಅನ್ನು ಮೂರು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಆದರೆ ಈ ಹೋಟೆಲ್ ಉಸ್ತುವಾರಿ ಸಯ್ಯದ್ ರಿಯಾಜ್, ಒಂದೇ ವರ್ಷಕ್ಕೆ ಹೋಟೆಲ್ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದಾರೆ.
ರಾತ್ರಿ ಬಂದು ನನ್ನ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸೆಗಿದ್ದಾರೆ. ನಾನು ನಲಪಾಡ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದೆ. ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡಿದ್ದೆ. ನಲಪಾಡ್ ಅವರಿಂದ ನನಗೆ ನ್ಯಾಯ ಸಿಗಬೇಕು ಎಂದು ಕೃತಿಕಾ ಗೌಡ ಕಣ್ಣೀರು ಇಟ್ಟಿದ್ದಾರೆ.
ಹೋಟೆಲ್ ಗುತ್ತಿಗೆ ಪಡೆದಿರುವ ಕೃತಿಕಾ ಹೋಟೆಲ್ ಸರಿಯಾಗಿ ನಡೆಸಿಕೊಂಡು ಹೋಗುತ್ತಿಲ್ಲ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಆಕೆ ಹೋಟೆಲ್ಗೆ ಲಾಸ್ ಮಾಡಿದ್ದಾಳೆ. ಮ್ಯಾನೇಜ್ಮೆಂಟ್ಗೆ 20 ಲಕ್ಷ ರೂಪಾಯಿಯ ಫೇಕ್ ಚೆಕ್ ಕೊಟ್ಟಿದ್ದಾಳೆ. ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ, ಹೋಟೆಲ್ಗೆ ಸಾಮಗ್ರಿ ಪೂರೈಸುತ್ತಿದ್ದವರಿಗೆ ಹಣ ನೀಡಿಲ್ಲ. ಕೇಳಿದರೆ ಜಗಳ ಮಾಡುತ್ತಾಳೆ. ಅವರು ನನಗೆ ಸುಮಾರು 35 ಲಕ್ಷ ರೂಪಾಯಿ ಹಣವನ್ನ ಕಟ್ಟಿಕೊಡಬೇಕಿದೆ. ಆಕೆ ಎಲ್ಲರಿಗೂ ಮೋಸ ಮಾಡಿದ್ದಾಳೆ. ಇದನ್ನು ಕೇಳಿದ್ದಕ್ಕೆ ತನಗೆ ಮಾತನಾಡಲು ಬರುತ್ತದೆ ಎಂದು ಏನೇನೋ ಆರೋಪ ಮಾಡಿದ್ದಾಳೆ. ಅದೆಲ್ಲ ಸುಳ್ಳು ಅಂತಾ ಸಯ್ಯದ್ ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಮುಡಾ ಹಗರಣ: ದಾಖಲೆ ಒದಗಿಸಿದವರಲ್ಲಿ ಕಾಂಗ್ರೆಸ್ ನಾಯಕರು ಸಹ ಇದ್ದರು – ಸ್ನೇಹಮಯಿ ಕೃಷ್ಣಾ