ಯುವತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮನೆಯೊಳಗೆ ತಾಳಿಕಟ್ಟಿದ್ದ ಯುವಕನನ್ನು ಬಂಧಿಸಿರುವ ಸಕಲೇಶಪುರ ಪೊಲೀಸರು ಯುವತಿ ರಕ್ಷಣೆ ಮಾಡಿದ್ದಾರೆ.
ಬಲವಂತವಾಗಿ ತಾಳಿಕಟ್ಟಿ ಕರೆದುಕೊಂಡು ಹೋಗಿರುವ ಬಗ್ಗೆ ಪೊಲೀಸರ ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ.
ಈ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ.
ಜನವರಿ 21 ರಂದು ಯುವತಿ ಮನೆಗೆ ನುಗ್ಗಿ ತಾಳಿಕಟ್ಟಿದ್ದ ಅರೆಕೆರೆಯ ಯುವಕ ಸತೀಶ್, ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದನು.
ಸ್ನೇಹಿತರ ಜೊತೆ ಸೇರಿ ಯುವತಿ ಮನೆಗೆ ನುಗ್ಗಿ ಸತೀಶ್ ತಾಳಿಕಟ್ಟಿದ್ದನು. ಈ ಸಂಬಂಧ ಮರುದಿನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೋಷಕರ ದೂರು ಆಧರಿಸಿ ತನಿಖೆ ಮಾಡಿ ಆರೋಪಿಯನ್ನು ಪೊಲೀಸರು ಈಗ ಬಂಧಸಿದ್ದಾರೆ.
ಈ ನಡುವೆ ಜನವರಿ 25 ರಂದು ಮದುವೆ ನಿಗದಿಯಾಗಿದ್ದ ಯುವತಿಗೆ ಜನವರಿ 21 ರಂದೇ ತಾಳಿಕಟ್ಟಿದ್ದ ಯುವಕ ಆಕೆಯನ್ನು ಕರೆದುಕೊಂಡು ಹೋಗಿ ತಾನು ಯುವತಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ಸತೀಶ್ ಆಕೆಗೆ ತಾಳಿಕಟ್ಟಿದ್ದನು.
ಆಕೆಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದ ಯುವತಿಗೆ ತಾಳಿಕಟ್ಟಿದ ಯುವಕ ಸತೀಶ್ ಈಗ ಪೊಲೀಸರ ವಶದಲ್ಲಿದ್ದಾನೆ.