ಕೊಡಗಿನಲ್ಲಿ ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಅಣ್ಣ – ತಮ್ಮಂದಿರ ಜಗಳದಲ್ಲಿ ಭಾವನಿಂದ ಗುಂಡೇಟು ತಿಂದ ಮಹಿಳೆಯೂ ಈ ಸಂಜೆ ಸಾವನ್ನಪ್ಪಿದ್ದಾಳೆ
ಪೊನ್ನಂಪೇಟೆ ತಾಲ್ಲೂಕಿನ ಕಿರಗೂರಿನಲ್ಲಿ ಅಡಿಕೆ ಬೆಳೆ ವಿಚಾರಕ್ಕೆ ನಡೆದ ಜಗಳದಲ್ಲಿ ಅಣ್ಣ ತಮ್ಮನ ಮೇಲೆ ಗುಂಡು ಹಾರಿಸಿದ ಪರಿಣಾಮ ಗುಂಡೇಟಿಗೆ ತಮ್ಮ ಮಧು (42) ಎಂಬಾತ ಬಲಿಯಾಗಿದ್ದರು.
ಮಧುಗೆ ಗುಂಡೇಟು ಹೊಡೆದಾಗ ತಡೆಯಲು ಹೋದ ತನ್ನ ಪತ್ನಿ ಯಶೋಧ (50) ಮೇಲೂ ಸಾಗರ್ ಸೋಮಯ್ಯ ಗುಂಡು ಹಾರಿಸಿದ್ದರು
ಇದೀಗ ಗುಂಡೇಟಿನಲ್ಲಿ ಗಾಯಗೊಂಡಿದ್ದ ಮಹಿಳೆ ಯಶೋಧ ಕೂಡ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಬಳಿಕ ಕೊಲೆ ಆರೋಪಿ ಸಾಗರ್ ಸೋಮಯ್ಯ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.