ಕಣ್ಣೀರು ಹಾಕುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದ ಅಪ್ಪು ಪತ್ನಿ ಅಶ್ವಿನಿ

Team Newsnap
0 Min Read

ಪವರ್​​ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಇಂದು ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಮಾಡ್ತಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಭೋಜನ ಕೂಟ ನಡೆಯುತ್ತಿದ್ದು, ಡಾ.ರಾಜ್ ಕುಟುಂಬದ ಪ್ರಮುಖರು ಅಭಿಮಾನಿ ದೇವರುಗಳಿಗೆ ಊಟ ಬಡಿಸಿ ಭಾವುಕರಾದರು.

ದಿವಗಂತ ಪುನೀತ್​ ರಾಜ್​ಕುಮಾರ್ ಪತ್ನಿ ಅಶ್ವಿನಿ, ಕಣ್ಣೀರು ಹಾಕುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು.

ಶಿವಣ್ಣ, ರಾಘಣ್ಣ ಕೂಡ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಕೈಮುಗಿಯುತ್ತ ಮಾತನಾಡಿಸಿದರು.

ಕರುನಾಡಿನ ಮನೆಮನೆಯ ಅಪ್ಪು ತೀರಿಕೊಂಡು ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಡಾ.ರಾಜ್​ಕುಟುಂಬ ಅಪ್ಪು ಅಭಿಮಾನಿಗಳಿಗೆ ಅನ್ನದಾನ ಮಾಡುತ್ತಿದೆ

Share This Article
Leave a comment