‘ಪುನೀತ ಪರ್ವ’ ನೋಡುತ್ತಿದ್ದ ಅಪ್ಪು ಅಭಿಮಾನಿ ಗಿರಿರಾಜ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವು

Team Newsnap
1 Min Read
Appu fan watching 'Puneetha Parva', died of a heart attack ‘ಪುನೀತ ಪರ್ವ’ ನೋಡುತ್ತಿದ್ದ ಅಪ್ಪು ಅಭಿಮಾನಿ ಗಿರಿರಾಜ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವು

ಗಂಧದಗುಡಿ ಚಿತ್ರದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಅಪ್ಪು ಅಭಿಮಾನಿ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ವಿಧಾನಸಭೆ ಚುನಾವಣೆ : ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ -HDK

ಗಿರಿರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ ಪುನೀತ್ ಅಭಿಮಾನಿ. ಮಲ್ಲೇಶ್ವರನ ಲಿಂಕ್ ರೋಡ್​​ ಸಮೀಪ ತಮ್ಮ ನಿವಾಸದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮವನ್ನು ನೋಡುತ್ತ ಕುಳಿತಿದ್ದರು. ಹೃದಯಾಘಾತಕ್ಕೂ ಮುನ್ನ ಎಂಥ ಮನುಷ್ಯ ತೀರಿ ಹೋದ ಎಂದ ಕಣ್ಣೀರಿಟ್ಟಿದ್ದರಂತೆ.

ನಿನ್ನೆ ಪುನಿತ್ ಪರ್ವ ಕಾರ್ಯಕ್ರಮ ನೋಡಿ ಬೇಸರಗೊಂಡಿದ್ದ ಅಭಿಮಾನಿ‌ ಗಿರಿರಾಜ್, ಒಂದು ವಿಡಿಯೋ ನೋಡಿ ನನಗೂ ಅಪ್ಪು ಥರಾ ಊಟ ಮಾಡಿಸು ಎಂದು ಅಮ್ಮನ ಬಳಿ ಹೇಳಿದ್ದನಂತೆ. ಅದರಂತೆ ನಿನ್ನೆ ತಾಯಿ ಕೈಯಲ್ಲಿ ತುತ್ತು ತಿನ್ನಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಅಪ್ಪು ಫೋಟೋಗೆ ಅಭಿಮಾನಿ ದಿನಾ ಪೂಜೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

10.30 ರ ಸುಮಾರಿಗೆ ಬಾತ್​​ ರೂಮಿಗೆ ಹೋಗಿದ್ದಾರೆ. ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಮನೆಯವರಿಗೆ ಗೊತ್ತಾದ ಕೂಡಲೇ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a comment