Karnataka

ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ : ಯಾವ ಜಿಲ್ಲೆಗೆ ಯಾರು ?

ಬೆಂಗಳೂರು: ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಬಿಜೆಪಿ, ಘಟಕದ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷರುಗಳನ್ನೇ ಮುಂದುವರಿಸಲಾಗಿದೆ.

ರಾಜ್ಯಾಧ್ಯಕ್ಷ ಬಿ . ವೈ ವಿಜಯೇಂದ್ರ ಪ್ರಕಟಣೆ ಹೊರಡಿಸಿ. ಹಲವು ಜಿಲ್ಲೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದಾರೆ .ಪಕ್ಷದನಿಷ್ಠಾವಂತರನ್ನೂ ಗುರುತಿಸಿ ಜವಾಬ್ದಾರಿ ವಹಿಸಿದ್ದಾರೆ.

ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಅವರಿಗೆ ರಾಯಚೂರು ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಲ್.ನಾಗೇಂದ್ರ ಅವರಿಗೆ ಮೈಸೂರು ನಗರ ಜಿಲ್ಲಾಧ್ಯಕ್ಷ,ಸಿ.ಎಸ್.
ನಿರಂಜನ್‌ಕುಮಾರ್ ಅವರಿಗೆ ಚಾಮರಾಜ ನಗರ ಜಿಲ್ಲಾಧ್ಯಕ್ಷ ಹಾಗೂ ಅರುಣ್ ಕುಮಾರ್ ಪೂಜಾರ್ ಅವರಿಗೆ ಹಾವೇರಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.

39 ಜಿಲ್ಲಾಧ್ಯಕ್ಷರ ಪೈಕಿ ಒಂದು ಜಿಲ್ಲೆಗೆ ಒಬ್ಬರು ಮಹಿಳೆಯರನ್ನು ನೇಮಿಸಲಾಗಿದೆ. ಬೆಳಗಾವಿ ನಗರ ಘಟಕದ ಅಧ್ಯಕ್ಷರನ್ನಾಗಿ ಗೀಡಾ ಸುತಾ‌ರ್ ಅವರನ್ನು ನೇಮಿಸಲಾಗಿದೆ.

ಅಧ್ಯಕ್ಷರ ನೇಮಕದ ವಿವರ :

  • ಧಾರವಾಡ ಗ್ರಾಮಾಂತರ : ನಿಂಗಪ್ಪ ಸುತ್ತಗಟ್ಟಿ
  • ಬೆಳಗಾವಿ ನಗರ: ಗೀತಾ ಸುತಾರ್
  • ಬೆಳಗಾವಿ ಗ್ರಾಮಾಂತರ: ಸುಭಾಷ್ ಪಾಟೀಲ್
  • ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಳ್
  • ಬಾಗಲಕೋಟೆ: ಶಾಂತಗೌಡ ಪಾಟೀಲ್
  • ವಿಜಯಪುರ: ಆರ್.ಎಸ್.ಪಾಟೀಲ್
  • ಬೀದರ್: ಸೋಮನಾಥ ಪಾಟೀಲ್
  • ಮೈಸೂರು ನಗರ : ಎಲ್.ನಾಗೇಂದ್ರ
  • ಮೈಸೂರು ಗ್ರಾಮಾಂತರ : ಎಲ್.ಆರ್.ಮಹಾದೇವಸ್ವಾಮಿ
  • ಚಾಮರಾಜನಗರ :ಸಿ.ಎಸ್.ನಿರಂಜನ್ ಕುಮಾರ್
  • ಮಂಡ್ಯ : ಇಂದ್ರೇಶ್ ಕುಮಾರ್
  • ಹಾವೇರಿ : ಅರುಣ್ ಕುಮಾರ್ ಪೂಜಾರ
  • ದಾವಣಗೆರೆ: ರಾಜಶೇಖರ್
  • ತುಮಕೂರು: ಎಚ್.ಎಸ್.ರವಿಶಂಕರ(ಹೆಬ್ಬಾಕ)
  • ಬೆಂಗಳೂರು ಗ್ರಾಮಾಂತರ: ರಾಮಕೃಷ್ಣಪ್ಪ
  • ಚಿಕ್ಕಬಳ್ಳಾಪುರ: ರಾಮಲಿಂಗಪ್ಪ
  • ವಿಜಯನಗರ: ಚನ್ನಬಸವನಗೌಡ ಪಾಟೀಲ್
  • ಬಳ್ಳಾರಿ: ಅನಿಲ್ ಕುಮಾರ್ ಮೋಕಾ
  • ರಾಯಚೂರು: ಡಾ.ಶಿವರಾಜ ಪಾಟೀಲ್
  • ಕೊಪ್ಪಳ: ನವೀನ್ ಗುಳಗಣ್ಣನವರ್
  • ಯಾದಗಿರಿ: ಅಮೀನ್ ರೆಡ್ಡಿ
  • ಕೋಲಾರ: ಡಾ.ಕೆ.ಎನ್.ವೇಣುಗೋಪಾಲ್
  • ಬೆಂಗಳೂರು ಉತ್ತರ: ಎಸ್.ಹರೀಶ್
  • ಬೆಂಗಳೂರು ಕೇಂದ್ರ: ಸಪ್ತಗಿರಿಗೌಡ
  • ಬೆಂಗಳೂರು ದಕ್ಷಿಣ: ಕೆ.ಸಿ.ರಾಮಮೂರ್ತಿ
  • ಹುಬ್ಬಳ್ಳಿ-ಧಾರವಾಡ :ತಿಪ್ಪಣ್ಣ ಮಜ್ಜಗಿ
  • ಉತ್ತರ ಕನ್ನಡ : ಎನ್.ಎಸ್.ಹೆಗಡೆ
  • ಶಿವಮೊಗ್ಗ : ಟಿ.ಡಿ.ಮೇಘರಾಜ್
  • ಚಿಕ್ಕಮಗಳೂರು : ದೇವರಾಜ ಶೆಟ್ಟಿ
  • ಉಡುಪಿ : ಕಿಶೋರ್ ಕುಂದಾಪುರ
  • ರಾಮನಗರ: ಆನಂದಸ್ವಾಮಿ
  • ಮಧುಗಿರಿ: ಬಿ.ಸಿ.ಹನುಮಂತೇಗೌಡ
  • ಚಿತ್ರದುರ್ಗ: ಎ.ಮುರಳಿ
  • ಕೊಡಗು : ರವಿ ಕಾಳಪ್ಪ
  • ಹಾಸನ : ಸಿದ್ದೇಶ್ ನಾಗೇಂದ್ರ
  • ಕಲಬುರಗಿ ಗ್ರಾಮಾಂತರ : ಶಿವರಾಜ ಪಾಟೀಲ್ ರದ್ದೇವಾರಿ
  • ಕಲಬುರಗಿ ನಗರ: ಚಂದ್ರಕಾಂತ ಪಾಟೀಲ್
  • ಗದಗ: ರಾಜು ಕುರಡಗಿ
  • ದಕ್ಷಿಣ ಕನ್ನಡ : ಸತೀಶ್ ಕುಂಪಲ
Team Newsnap
Leave a Comment

Recent Posts

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024