
ಮನದಲಿ ಮನೆಮಾಡಿ ನಿಂದಿರುವೆ
ನಿಮ್ಮ ನೋಡಲು ಕಂಗಳು ಕಾತರಿಸುತಿವೆ
ಅಂಬಾರಿಯಾದ ಹೆಗಲ ಬಯಸಿದೆ
ಅಪ್ಪಾ ಎಲ್ಲಿರುವೆ?
ನಿಮ್ಮ ಮೊಗಲಗಲದೆ ಆ ನಗುವು
ರಾಜನವೋಲ್ ನಡೆವ ಆ ನಡೆಯು
ನೋಡಲೆರಡು ಕಣ್ಣು ಸಾಲದು
ಅಪ್ಪಾ ಎಲ್ಲಿರುವೆ?
ಬಂಧು ಬಳಗವ ಆದರಿಪ ಪರಿಯು
ಸತ್ಕರಿಪ ನಿಮ್ಮ ಗುಣಧರ್ಮವು
ನೆನಪಾಗುತಿವೆ ಚಣಚಣವೂ
ಅಪ್ಪಾ ಎಲ್ಲಿರುವೆ?
ಮಂಕಾಗಿದೆ ಮನ, ಮುದುಡಿದೆ ಈ ಜೀವ
ಕಂಗಳು ತೊಯ್ದಿವೆ, ಮರೆತಿಹೆ ನಗಲು
ಮಿಡಿಯುತಿಗೆ ನಿನ್ನ ತೇಜ ನೋಡಲು
ಅಪ್ಪಾ ಎಲ್ಲಿರುವೆ?
- ಬರ ನಿರ್ವಹಣೆ : 31 ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ: ಕೃಷಿ ಸಚಿವರು
- ಅನ್ನಭಾಗ್ಯ : ಹಣ ಮನೆಯ 2ನೇ ಯಜಮಾನರ ಖಾತೆಗೆ
- ರಾಜ್ಯದ 63 ಕಡೆ ಲೋಕಾ ದಾಳಿ – ಭ್ರಷ್ಟರನ್ನು ಜಾಲಾಡುತ್ತಿರುವ ಅಧಿಕಾರಿಗಳು
- 2024ರ ಜ. 23 ರಂದು 545 ಪಿಎಸ್ಐ ಹುದ್ದೆಗೆ ಮರು ಪರೀಕ್ಷೆ- ಗೃಹ ಸಚಿವ
- ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಹತ್ಯೆ?; ಸುಪಾರಿ ಕೊಲೆ ಶಂಕೆ
- ಮದಗಜದೊಂದಿಗೆ ಕಾಳಗ : ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸಾವು