February 18, 2026

Newsnap Kannada

The World at your finger tips!

anna hajare

ರೈತರ ಸಮಸ್ಯೆ ಗೆ ಪರಿಹಾರ ಒತ್ತಾಯಿಸಿ ಉಪವಾಸ ಕೂರುವೆ – ಅಣ್ಣಾ ಹಜಾರೆ

Spread the love

ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರಿಗೆ ಸಾಥ್ ನೀಡಲು ಮುಂದಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರೈತರಿಗೆ ಸಂಪೂರ್ಣ ಬೆಂಬಲ ನೀಡಿ ಬೇಡಿಕೆ ಈಡೇರದಿದ್ದರೆ ಉಪವಾಸ ಕೂರುವ ಎಚ್ಚರಿಕೆ ನೀಡಿದ್ದಾರೆ.

ಡಿಸೆಂಬರ್ 8 ರಂದು ಭಾರತ್ ಬಂದ್ ನಂತರದಲ್ಲಿ ರೈತ ಮುಖಂಡರು ತಮ್ಮ ಬೇಡಿಕೆಯ ಮೇರೆಗೆ ಒಂದು ದಿನ ಉಪವಾಸ ನಡೆಸಿದರು. ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಹ ರೈತರಿಗೆ ಬೆಂಬಲವಾಗಿ ಉಪವಾಸ ಮಾಡಿದರು ಕೇಂದ್ರ ಮಾತ್ರ ಪಟ್ಟು ಸಡಿಸಲಿಲ್ಲ.

ರೈತರ ಆಂದೋಲನವನ್ನು ಬೆಂಬಲಿಸಲು ದೇಶಾದ್ಯಂತ ರೈತರು ಬೀದಿಗಿಳಿಯಬೇಕು ಎಂದು ಕರೆನೀಡಿದ್ದ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ರೈತರ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಕೂರುವುದಾಗಿ ಎಚ್ಚರಿಕೆಯನ್ನು ನೀಡಿರುವುದು ಕೇಂದ್ರಕ್ಕೆ ಕಳವಳ ಉಂಟು ಮಾಡಿದೆ.

ರೈತರ ಸಮಸ್ಯೆ ಕುರಿತು ಅಣ್ಣಾ ಹಜಾರೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಸೋಮವಾರ ಈ ಪತ್ರ ಬರೆದಿದ್ದಾರೆ. ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ರೈತರ ಬೇಡಿಕೆಗಳು ಮತ್ತು ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುವಂತೆ ಅಣ್ಣಾ ಹಜಾರೆ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಒಂದು ದಿನ ಉಪವಾಸ ಮಾಡಿದ್ದ ಅಣ್ಣಾ

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಬರೆದ ಪತ್ರದಲ್ಲಿ ಅಣ್ಣಾ ಹಜಾರೆ, ‘ಲೋಕಪಾಲ್ ಚಳವಳಿಯ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಬೆಚ್ಚಿಬಿದ್ದಿತ್ತು. ಈ ರೈತರ ಪ್ರತಿಭಟನೆಯನ್ನು ನಾನು ಅದೇ ಮಾರ್ಗದಲ್ಲಿ ನೋಡುತ್ತಿದ್ದೇನೆ, ರೈತರು ಮಾಡಿದ ಭಾರತ್ ಬಂದ್ ದಿನದಂದು, ನಾನು ಒಂದು ದಿನ ಉಪವಾಸ ಮಾಡಿದ್ದೇನೆ, ಇಂದಿಗೂ ರೈತರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ರೈತರ ಸಮಸ್ಯೆಗಳು ಬಗೆಹರಿಯದಿದ್ದರೆ ನಾನು ಮತ್ತೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ತಮ್ಮ ಹಿಂದಿನ ಬೇಡಿಕೆಗಳ
ಬಗ್ಗೆ ಕೇಂದ್ರ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಬಂದು ಲಿಖಿತ ಭರವಸೆ ನೀಡಿದ್ದರು, ಆದರೆ ಇನ್ನೂ ಅದನ್ನು ಪಾಲಿಸಿಲ್ಲ ಎಂದು ಅಣ್ಣಾ ಹೇಳಿದ್ದಾರೆ. ಫೆಬ್ರವರಿ 5, 2019 ರಂದು, ನಿಲ್ಲಿಸಿದ ವೇಗವನ್ನು ಮರುಪ್ರಾರಂಭಿಸಲು ನಾನು ಯೋಚಿಸುತ್ತಿದ್ದೇನೆ” ಎಂದು ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

error: Content is protected !!