January 28, 2026

Newsnap Kannada

The World at your finger tips!

heart attack , Artist , mandya

An artist died of a heart attack while performing a play in Malavalli ಮಳವಳ್ಳಿಯಲ್ಲಿ ಕಲಾವಿದ ನಾಟಕ ಮಾಡುವಾಗಲೇ ಹೃದಯಾಘಾತದಿಂದ ಸಾವು

ಮಳವಳ್ಳಿಯಲ್ಲಿ ಕಲಾವಿದ ನಾಟಕ ಮಾಡುವಾಗಲೇ ಹೃದಯಾಘಾತದಿಂದ ಸಾವು

Spread the love

ಪೌರಾಣಿಕ ನಾಟಕ ಮಾಡುವ ವೇಳೆಯಲ್ಲೇ ಕಲಾವಿದರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

ದುಗ್ಗನಹಳ್ಳಿ ಗ್ರಾಮದ ನಂಜಯ್ಯ (46) ಮೃತ ಕಲಾವಿದ.ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳೇ ದಾರಿ ದೀಪ – ಸಿ ಡಿ ಕಿರಣ್

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಾಟಕ ನಡೆಯುತ್ತಿತ್ತು. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕದ ವೇಳೆಯಲ್ಲಿ ಸಾರ್ಥ್ಯಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ನಂಜಯ್ಯನಿಗೆ ಅಲ್ಲೇ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಾವಿದನ ಸಾವಿನ ನಂತರ ಸಹ ಕಲಾವಿದರು, ಗ್ರಾಮಸ್ಥರು ನಾಟಕ ನಿಲ್ಲಿಸಿದ್ದಾರೆ.

error: Content is protected !!