ಆನೇಕಲ್ ನ ಅಲಯನ್ಸ್ ಕಾಲೇಜಿನ ಗಲಾಟೆಗೆ ಸಂಬಂಧಿಸಿದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದಕ್ಕೆ ಹೋಗಿದೆ. ಸಧ್ಯಕ್ಕೆ ನಾಪತ್ತೆಯಾಗಿರುವ ಸ್ವರ್ಣಲತಾ ಆನೇಕಲ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದ ಸ್ವರ್ಣಲತಾಗೆ ನ್ಯಾಯಾಲಯ ಶಾಕ್ ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಆಗಸ್ಟ್ 10 ರಂದು ಕಾಲೇಜಿಗೆ ನುಗ್ಗಿ ಸ್ವರ್ಣಲತಾ, ಮಧುಕರ್ ಅಂಗೂರ್ ಸೇರಿದಂತೆ 50 ಜನರ ತಂಡದಿಂದ ಗಲಾಟೆ ನಡೆಸಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುರಘಾ ಸ್ವಾಮಿಗೆ ಚಿಕಿತ್ಸೆ: ನ್ಯಾಯಾಲಯ ಅನುಮತಿ
ಎ2 ಆರೋಪಿಯಾಗಿದ್ದ ಸ್ವರ್ಣಲತಾ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದು, ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಮುನ್ನವೇ ಸ್ವರ್ಣಲತಾ ಪೊಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗುವ ಆತಂಕದಲ್ಲಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು