ಹಿರಿಯ ನಟ ಶಿವರಾಂ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ ಎಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರಶಾಂತ್ ಆಸ್ಪತ್ರೆಯ ವೈದ್ಯಡಾ.ಎಸ್.ಎನ್ ಮೋಹನ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ವೈದ್ಯ ಮೋಹನ್ , ಶಿವರಾಮ್ ಅವರು ನಿನ್ನೆ ಹೇಗಿದ್ದರೋ ಅದೇ ರೀತಿ ಇದ್ದಾರೆ. ನಿನ್ನೆ ಗಿಂತ ಇಂದು ಶೇ.5 ಬಿಪಿ ಸಪೋರ್ಟ್ ಜಾಸ್ತಿಯಾಗಿದೆ ಎಂದರು.
ಕಂಡಿಷನ್ ನಿನ್ನೆಗಿಂತ ಇಂದು ಶೇ.6 ಕಡಿಮೆ ಆಗಿದೆ. ಸದ್ಯ ವೆಂಟಿ ಲೇಟರ್ ಮೂಲಕ ಉಸಿರಾಟ ಮಾಡುತ್ತಿದ್ದಾರೆ. ಬ್ರೈನ್ ಕೂಡು ಇಫ್ರುಮೆಂಟ್ ಕಂಡಿಲ್ಲ. ನಿನ್ನೆ ಇದ್ದಂತೆ ಇದೆ. ಬ್ರೈನ್ ಅಲ್ಲಿ ಇನ್ನು ಊತ ಜಾಸ್ತಿ ಇದೆ, ಯಾವುದೇ ಚೇತರಿಕೆ ಇಲ್ಲ. ನಾಳೆ ಕೂಡ ಎಂಆರ್ಐ ಸ್ಕ್ಯಾನ್ ಮಾಡಿ ಮುಂದಿನ ನಿರ್ಧಾರ ತೆಗೆದು ಕೊಳ್ತೀವಿ. ಬ್ರೈನ್ ಬಿಟ್ಟು ಉಳಿದೆಲ್ಲ ಅಂಗಾಗಗಳು ಕಾರ್ಯನಿರ್ವಹಿಸ್ತಿವೆ ಎಂದು ತಿಳಿಸಿದರು.
ನಾಳೆ ಅವರು ಸ್ಥಿತಿಯಲ್ಲಿ ಶೇ.1 ರಷ್ಟು ಚೇತರಿಕೆ ಕಂಡು ಅವಕಾಶ ಇದ್ದರೂ ಶಸ್ತ್ರ ಚಿಕಿತ್ಸೆ ಮಾಡೋ ಬಗ್ಗೆ ಯೋಚನೆ ಮಾಡ್ತೇವೆ. ನಾಳೆ ಬೆಳಗ್ಗೆ 10 ವೇಳೆ ಮುಂದಿನ ಮಾಹಿತಿ ನೀಡುತ್ತೇನೆ. ಮೆದುಳಿನ ಊತ ಕಡಿಮೆಯಾದರೇ ಮೆದುಳಿನ ಸಮಸ್ಯೆ ಕಡಿಮೆಯಾಗೋದಕ್ಕೆ ಅವಕಾಶ ಇರುತ್ತದೆ ಎಂಬ ಭರವಸೆ ಮಾತುಗಳನ್ನು ಹೇಳಿದರು.
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ
- ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್ ಶಾ
- ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ