ನಟ ರಜಿನಿಕಾಂತ್ ಮಗಳು ಐಶ್ವರ್ಯಾ ನಿವಾಸದ ಲಾಕರ್ನಲ್ಲಿ ಕಾಣೆಯಾಗಿದ್ದ ಚಿನ್ನ ಮತ್ತು ಡೈಮಂಡ್ಗಳನ್ನು ಮನೆಯ ಕೆಲಸದವಳೇ ಕದ್ದಿರುವುದನ್ನು ತೇನಾಂಪೇಟೆ ಪೊಲೀಸ್ ಪತ್ತೆ ಹಚ್ಚಿದದಾರೆ.
ಕಾರು ಚಾಲಕ ಮತ್ತು ಮನೆ ಕೆಲಸ ಮಾಡುತ್ತಿದ್ದಾಕೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕಾರಿನ ಡ್ರೈವರ್ ವೆಂಕಟೇಶ್ ಮತ್ತು ಈಶ್ವರಿ ಅವರು ಐಶ್ವರ್ಯಾ ಅವರ 100 ಪವನ್ ಚಿನ್ನಾಭರಣವನ್ನು ಮತ್ತು 30 ಗ್ರಾಂ ವಜ್ರಾಭರಣವನ್ನು ಇದರೊಂದಿಗೆ ನಾಲ್ಕು ಕಿಲೋಗ್ರಾಂ ಬೆಳ್ಳಿ ವಸ್ತುವನ್ನು ಕದ್ದಿದ್ದಾರೆ.
ಕದ್ದ ಆಭರಣದಿಂದ ಈಶ್ವರಿ ಮನೆ ಖರೀದಿ ಮಾಡಿದ್ದಾರೆ ಇತರ ವಸ್ತುಗಳನ್ನು ಅವರು ಖರೀದಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮನೆಕೆಲಸದಾಕೆ ಈಶ್ವರಿ ಅವರು ಐಶ್ವರ್ಯಾ ಅವರ ಮನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಐಶ್ವರ್ಯಾ ಲಾಕರ್ ಕೀ ಇರುವ ಸ್ಥಳದ ಬಗ್ಗೆ ಈಶ್ವರಿಗೆ ತಿಳಿದಿತ್ತು. ಹಾಗಾಗಿ ಲಾಕರ್ ತೆರೆಯುತ್ತಿದ್ದಳು. ಹಲವು ಬಾರಿ ಲಾಕರ್ ತೆರೆದು ಆಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪೊಲೀಸರು ಈಶ್ವರಿಯ ಆಸ್ತಿ, ಮನೆ ಆಸ್ತಿಯ ಬಗ್ಗೆ ದಾಖಲೆಯನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –‘ವಿದ್ಯಾನಿಧಿ ಯೋಜನೆ’: ಆಟೋ, ಕ್ಯಾಬ್ ಚಾಲಕರ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ