January 28, 2026

Newsnap Kannada

The World at your finger tips!

accident

ಟಿಪ್ಪರ್ ಹರಿದು ತಾಯಿ,ಮಗು ಸಾವು

Spread the love

ಟಿಪ್ಪರ್ ಲಾರಿ ಹರಿದು ತಾಯಿ,ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ.

ಹಾಡ್ಯಗ್ರಾಮದ ಶಶಿಕಲಾ(35), ಲಾವಣ್ಯ(4), ಮೃತಪಟ್ಟ ದುರ್ದೈವಿಗಳು. ಸಣ್ಣ ಪುಟ್ಟ
ಗಾಯಗಳೊಂದಿಗೆ ಪತಿ ದೇವರಾಜು(45) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

acc

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ದೇವರಾಜು ಬೆಳಗ್ಗೆ ಅನಾರೋಗ್ಯದ ನಿಮಿತ್ತ ಮಗಳು ಲಾವಣ್ಯಳಿಗೆ ಚಿಕಿತ್ಸೆ ಕೊಡಿಸಲು ತಮ್ಮ ಟಿವಿಎಸ್. ಸ್ಕೂಟರ್ (ಕೆಎ.11, ಇಎನ್.9016) ನಲ್ಲಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ಪತ್ನಿ ಶಶಿಕಲಾ ಜೊತೆ ಬಂದಿದ್ದರು, ಮಗು ವಿನ ಚಿಕಿತ್ಸೆ ಬಳಿಕ ಸ್ವಗ್ರಾಮಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್ ನಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ (ಕೆ.ಎ.11, ಬಿ.9408) ಟಿವಿಎಸ್ ಗೆ ಡಿಕ್ಕಿಯೊಡೆದಿದೆ.ಕೆಳಕ್ಕೆ ಬಿದ್ದ ತಾಯಿ,ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಪವಾಡ ಸದೃಶ ರೀತಿಯಲ್ಲಿ ದೇವರಾಜು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ಗ್ರಾಮಾಂತರ ಠಾಣಾ ಪಿಎಸ್ಐ ಸಿದ್ದರಾಜು ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!