ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿ ಕಂದಾಯ ನಿರೀಕ್ಷಕರೊಬ್ಬರು ಕೃಷಿಯೇತರ ಭೂ ಪರಿವರ್ತನೆಗಾಗಿ 4 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ಭ್ರಷ್ಟಾಚಾರ ನಿಗ್ರಹ ದಳದ (ACB)ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕಂದಾಯ ನಿರೀಕ್ಷಕ ಶ್ರೀನಿವಾಸ ಮೂರ್ತಿ ಎಂಬುವವರು ಭೂ ಪರಿವರ್ತನೆಯ ಪರಿಶೀಲನೆಗಾಗಿ ಬಂದ ಅರ್ಜಿದಾರರೊಬ್ಬರ ಬಳಿ 4 ಸಾವಿರ ರು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಅರ್ಜಿದಾರರು ಈ ಕುರಿತಂತೆ ಚಾಮರಾಜನಗರ ACB ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಮೈಸೂರು ವಲಯದ ACB ಎಸ್ಪಿ V J ಸಜೀತ್ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಗುರುವಾರ ಕಾರ್ಯಾಚರಣೆ ನಡೆಸಿ ಕಂದಾಯ ಅಧಿಕಾರಿಯನ್ನು ಬಲೆಗೆ ಹಾಕಿಕೊಂಡರು.
ಅಧಿಕಾರಿ ಪಡೆದಿದ್ದ ಲಂಚದ ಹಣವೂ ಸೇರಿದಂತೆ ಆ ಅಧಿಕಾರಿಯನ್ನು ACB ಯವರು ವಶಕ್ಕೆ ಪಡೆದುಕೊಂಡಿದ್ದಾರೆ.