ಕರೊನಾ ಲಸಿಕೆಯ ಮೊದಲ ಡೋಸ್ ಸಾವಿನ ಸಾಧ್ಯತೆಯನ್ನು ಶೇಕಡ 97.5ರಷ್ಟು ತಡೆಯುತ್ತದೆ ಹಾಗೂ 2ನೇ ಡೋಸ್ನ ಪರಿಣಾಮ ಶೇ, 97.5ರಷ್ಟಿರುತ್ತದೆ ಎಂದು ಹೊಸ ಅಧ್ಯಯನದಿಂದ ಮಾಹಿತಿ ಬಹಿರಂಗವಾಗಿದೆ.
ಏಪ್ರಿಲ್-ಮೇನಲ್ಲಿ ಎರಡನೇ ಅಲೆ ವೇಳೆ ಲಸಿಕೆ ಪಡೆಯದವರಲ್ಲೇ ಹೆಚ್ಚಿನ ಮರಣ ದಾಖಲಾಗಿದೆ.
ಹೀಗಾಗಿ ಸೋಂಕು ತಡೆಗೆ ಲಸಿಕೆ ಪರಿಣಾಮಕಾರಿ ಎಂಬುದು ಋಜುವಾತಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ‘
ವೈರಸ್ ವಿರುದ್ಧ ವ್ಯಾಕ್ಸಿನ್ ಅತ್ಯಂತ ಮಹತ್ವದ ಗುರಾಣಿಯಾಗಿದೆ’ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.
ಕರೊನಾ ತಡೆಗಾಗಿ ಮೂಗಿನ ಮೂಲಕ ನೀಡುವಂಥ ಭಾರತ್ ಬಯೋಟೆಕ್ನ ಬಿಬಿವಿ154 ಲಸಿಕೆಯ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಸಂಸ್ಥೆ ಹಾಗೂ ಗುರುನಾನಕ್ ಆಸ್ಪತ್ರೆ, ಹರಿಯಾಣದ ಪಲ್ವಾಲ್ನಲ್ಲಿರುವ ಇನ್ಕ್ಲೆನ್ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಎರಡರಿಂದ ಮೂರು ವಾರಗಳಲ್ಲಿ ಪರೀಕ್ಷೆ ಆರಂಭವಾಗುವ ನಿರೀಕ್ಷೆಯಿದೆ.
18-60 ವಯೋಗುಂಪಿನ ಆರೋಗ್ಯ ಸ್ವಯಂಸೇವಕರಲ್ಲಿ ಜೂನ್ ತಿಂಗಳಲ್ಲೇ ಭಾರತ್ ಬಯೋಟೆಕ್ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ.
ವೃದ್ಧರಲ್ಲಿ ಕೇಸ್ ಜಾಸ್ತಿ
ಲಸಿಕೆಯ ಸಂಪೂರ್ಣ ಡೋಸ್ ಪಡೆದರೂ ಕೋವಿಡ್ ಸೋಂಕು ತಗಲುವ ಅಪಾಯ ವೃದ್ಧರು ಹಾಗೂ ಅನ್ಯವ್ಯಾಧಿಗಳಿಂದ ಬಳಲುತ್ತಿರುವವರಲ್ಲಿ ಜಾಸ್ತಿಯಿದೆ. ಸಂಪೂರ್ಣ ಲಸಿಕೆ ಪಡೆದವರಲ್ಲಿ ಕರೊನಾ ಸೋಂಕು ದೃಢಪಟ್ಟ 12,908 ಗಂಭೀರ ಪ್ರಕರಣಗಳು ಆಗಸ್ಟ್ 30ರ ವರೆಗೆ ತನಗೆ ಬಂದಿವೆ.
ಸುಮಾರು ಶೇ. 70 ರಷ್ಟು ಪ್ರಕರಣಗಳು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬಂದಿದೆ. ಮೃತಪಟ್ಟವರಲ್ಲಿ ಶೇ. 87ರಷ್ಟು ಮಂದಿ ಕೂಡ 65 ವರ್ಷ ಮೇಲಿನವರು ಎಂದೂ ಸಿಡಿಸಿ ಹೇಳಿದೆ.
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More
ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More
ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More
ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್… Read More
ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More
This website uses cookies.
Leave a Comment