June 1, 2023

Newsnap Kannada

The World at your finger tips!

accident , demise , karnataka

Terrible accident near Kushtagi - 6 people tragically died on the spot ಕುಷ್ಟಗಿ ಬಳಿ ಭೀಕರ ಅಪಘಾತ - ಸ್ಥಳದಲ್ಲೇ 6 ಜನರ ದುರಂತ ಸಾವು

ಹುಬ್ಬಳ್ಳಿ ಬಳಿ ಖಾಸಗಿ ಬಸ್ – ಲಾರಿ ನಡುವೆ ಡಿಕ್ಕಿ – 7 ಮಂದಿ ಸಾವು : 26 ಮಂದಿಗೆ ಗಾಯ

Spread the love

ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ 26 ಮಂದಿ ಗಾಯಗೊಂಡ ಘಟನೆ ಹುಬ್ಬಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ತಾರಿಹಾಳ ಬೈ ಪಾಸ್ ಬಳಿ ಕಳೆದ ರಾತ್ರಿ ಮಧ್ಯರಾತ್ರಿ ಸಂಭವಿಸಿದೆ.

ಈ ದುರಂತದಲ್ಲಿ ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಸತ್ತವರು ಮಹಾರಾಷ್ಟ್ರದ ಸೊಲ್ಲಾಪುರದ ಮೂಲದವರು ಎಂದು ಹೇಳಲಾಗಿದೆ, ಗಾಯಗೊಂಡ 26 ಮಂದಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ

ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಸೊಲ್ಲಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ.

ಕಳೆದ ವಾರ ಧಾರವಾಡದ ಸಮೀಪ ಮದುವೆ ಮುಗಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದ ಕೂಸರ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದು 10 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಂದು ಭೀಕರ ಅಪಘಾತ ಕಳೆದ ರಾತ್ರಿ ಸಂಭವಿಸಿದೆ.

error: Content is protected !!