ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಮತ್ತು ಪ್ರಿಯತಮೆಯಿಂದ ಸರ್ಕಾರಿ ಹಣದಲ್ಲಿ ಅಂದ ದರ್ಬಾರ್ ತೋರಿದ ಘಟನೆ ಜರುಗಿದೆ.
ಬಿಬಿಎಂಪಿ ಬ್ಯಾಟರಾಯನಪುರ ಕಚೇರಿ ಎಸ್ ಡಿಎ ಪ್ರಕಾಶ್ ಎಂಬಾತ ತನ್ನ ಪ್ರಿಯತಮೆ ಅಕೌಂಟಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿರುವುದು ಬಯಲಾಗಿದೆ.ಇದನ್ನು ಓದಿ –ಸೆಪ್ಟಂಬರ್ 2 ರಂದು ಮಂಗಳೂರಿಗೆ ಪ್ರಧಾನಿ ಭೇಟಿ
ಸುಮಾರು 14.70 ಲಕ್ಷ ರು ಹಣ ಪ್ರಕಾಶ್ ಹಾಗೂ ಪ್ರೇಯಸಿ ಕಾಂಚನಾ ಅಕೌಂಟ್ಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಇಇ ರಾಜೇಂದ್ರ ನಾಯಕ್ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಎಸ್ ಡಿಎ ಪ್ರಕಾಶ್ ಮತ್ತು ಆತನ ಪ್ರೇಯಸಿ ಕಾಂಚನಾ ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಕಾಂಚನಾ ಚಿನ್ನ ಖರೀದಿ ಹಾಗೂ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿರುವುದಾಗಿ ತಿಳಿದುಬಂದಿದೆ.
ಬಿಬಿಎಂಪಿಯು 2021 -22 ರ ಅವಧಿಯ ಆಡಿಟ್ ನಡೆಸುವ ವೇಳೆ ಬ್ಯಾಟರಾಯನಪುರ ಕಚೇರಿಯ ಆಡಿಟ್ ಪುಸ್ತಕ ಒದಗಿಸಲು ಇಇ ರಾಜೇಂದ್ರ ನಾಯಕ್ ಅವರು ಪ್ರಕಾಶ್ ಗೆ ಸೂಚಿಸಿದರು.
ಆದರೆ ಪ್ರಕಾಶ್, ಆಡಿಟ್ ಪುಸ್ತಕ ಒದಗಿಸದೆ ರಜೆ ಮೇಲೆ ತೆರಳಿದ್ದ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಖುದ್ದು ತಾವೇ ಪರಿಶೀಲನೆ ನಡೆಸಿದರು. ಕೆನರಾ ಬ್ಯಾಂಕ್ ಅಕೌಂಟ್ ಪರಿಶೀಲನೆ ವೇಳೆ ಹಣ ದುರುಪಯೋಗ ಬೆಳಕಿಗೆ ಬಂದಿದೆ.
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ