February 20, 2026

Newsnap Kannada

The World at your finger tips!

sharath

ಹುಡುಗಿಗೆ ಮನೆ ತೋರಿಸಿದ ಯುವಕನನ್ನು ಅಪಹರಿಸಿ, ಹತ್ಯೆ ಮಾಡಿದ ದುಷ್ಕರ್ಮಿಗಳು

Spread the love

ಹಾಡುಹಗಲೇ ನಾಲ್ಕು ದುಷ್ಕರ್ಮಿಗಳ ಗುಂಪು ಯುವಕನನ್ನು ಆಟೋದಲ್ಲಿ ಅಪಹರಣ ಮಾಡಿ, ಬರ್ಬರ ಹತ್ಯೆ ಮಾಡಿರುವ ಘಟನೆ ಮಳವಳ್ಳಿ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಪಟ್ಟಣದ ಎನ್ .ಇ ಎಸ್ ಬಡಾವಣೆಯ ಜಯಮ್ಮ ಪುತ್ರ ಶರತ್ (23) ಹತ್ಯೆಯಾದ ಯುವಕ.

ಕಳೆದ ಒಂದು ವಾರದ ಹಿಂದೆ ನನ್ನ ಹೋಟೆಲ್ ಗೆ ಹುಡುಗಿಯೊಬ್ಬಳು ಬಂದು ಹುಡುಗ ಪೋಟೋ ತೋರಿಸಿ ಅಡ್ರೆಸ್ ಕೇಳಿದಳು.

ನನ್ನ ಮಗ ಶರತ್ ಮನೆ ತೋರಿಸಿದ ಈ ದ್ವೇಷ ವನ್ನು ಮುಂದೆ ಇಟ್ಟುಕೊಂಡು ಇಂದು ನನ್ನ ಮಗನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಚಚ್೯ ಹಿಂಭಾಗ ಹಲ್ಲೆ ಮಾಡಿದ್ದಾರೆ. ನಾನು ಕಿರುಚಾಡಿಕೊಂಡಾಗ ನನ್ನ ಮಗ ಎಸೆದು ಓಡಾಡಿ ಹೋದರು ಎಂದು ಮೃತಳ ತಾಯಿ ಜಯಮ್ಮ ತಿಳಿಸಿದ್ದಾರೆ.

ತಕ್ಷಣ ಮಳವಳ್ಳಿಸಾರ್ವಜನಿಕ ಅಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ತೊಡೆಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದು ಅತಿಯಾದ ರಕ್ತಸ್ರಾವ ವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಎನ್ನಲಾಗಿದೆ.

ಮಳವಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

error: Content is protected !!