January 29, 2026

Newsnap Kannada

The World at your finger tips!

ROHINI1

ಬೀಸೋ ದೊಣ್ಣೆಯಿಂದ ಮತ್ತೆ ತಪ್ಪಿಸಿಕೊಂಡ ಡಿಸಿ ರೋಹಿಣಿ

Spread the love

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತೆ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಎಎಸ್‌ ಅಧಿಕಾರಿ ಬಿ.ಶರತ್ ವರ್ಗಾವಣೆ ವಿಷಯ ಸಿಎಟಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ರೋಹಿಣಿ ಪರ ವಕೀಲರಿಂದ ವಾದ ಮಂಡನೆ. ಮಾಡಿದರು. ಮೂರು ಅಂಶಗಳ ಮೇಲೆ ರೋಹಿಣಿ ಪರ ವಾದ ಮಂಡಿಸಿದರು ಎಂದು ಮೂಲಗಳು ಹೇಳಿವೆ.

ಈಗ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಈ ವೇಳೆ ರೋಹಿಣಿ ವಾಪಸ್ಸು ಕಳಿಸುವುದು ಕಷ್ಟ ಎನ್ನುವ ವಾದವೂ ಕೇಳಿ ಬಂದಿದೆ.

ಬಿ.ಶರತ್ ಪರ ವಕೀಲರಿಂದ ಮುಂದಿನ ವಾರ ಅಂತಿಮ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪುಅನ್ನು ಸಿಇಟಿ ನ್ಯಾಯಾಲಯ ನೀಡುವ ಸಾಧ್ಯತೆ ಇದೆ.


ನ್ಯಾಯಾಲಯದ ಇಂದಿನ ನಿರ್ಧಾರ ದಿಂದ ರೋಹಿಣಿ ಬೀಸೋದೊಣ್ಣೆ ತಪ್ಪಿಸಿಕೊಂಡಂತಾಗಿದೆ.

error: Content is protected !!