ಭಾರತ್ ಬಂದ್ ನಿಂದಾಗಿ ಮದುವೆಗೆ ಸಿದ್ದ ವಾಗಿದ್ದ ನವ ವಧು 2 ಕಿ ಮಿ ನಡೆದುಕೊಂಡೇ ದೇವಸ್ಥಾನಕ್ಕೆ ತೆರಳಿದ ಘಟನೆ ಬಿಹಾರ್ ನಲ್ಲಿ ಜರುಗಿದೆ.
ಬಿಹಾರದ ಸಮಸ್ತಿಪುರದಲ್ಲಿ ಬಂದ್ ಜೋರಾಗಿತ್ತು. ಹೀಗಾಗಿ ಮದುವೆಗೆ ಸಿದ್ಧವಾಗಿದ್ದ ವಧು ಎರಡು ಕಿಮೀ ನಡೆದುಕೊಂಡು ದೇವಸ್ಥಾನ ತಲುಪಬೇಕಾಯಿತು .
ದೇವಾಲಯದಲ್ಲಿ ಪೂಜೆ ಸಲ್ಲಿಸಲು ವಧು ಹೊರಟಿದ್ದಾಳೆ. ಈ ವೇಳೆ ಆಕೆಯ ವಾಹನವನ್ನು ತಡೆಯಲಾಗಿದೆ. ಅನಿವಾರ್ಯವಾಗಿ 2 ಕಿಮಿ ಕಾಲು ನಡಿಗೆಯಲ್ಲಿಯೇ ದೇವಾಲಯದ ಕಡೆ ಹೆಜ್ಜೆ ಹಾಕಿದ್ದಾಳೆ. ಮುಂದೆ ಸಿಕ್ಕ ಆಟೋವೊಂದನ್ನು ಹಿಡಿದು ದೇವಾಲಯ ತಲುಪಿದ್ದಾರೆ.
ವಧುವಿನ ಜತೆ ಅನೇಕ ಮಹಿಳೆಯರು ನಡೆಸಿಕೊಂಡೇ ದೇವಸ್ಥಾನಕ್ಕೆ ತೆರಳಿದರು.
ಭಾರತ್ ಬಂದ್ ಗೆ ಉತ್ತರ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕದ್ದರೆ ದಕ್ಷಿಣ ಭಾರತದಲ್ಲಿ ಅಂಥ ಪರಿಣಾಮ ಏನೂ ಕಂಡುಬರಲಿಲ್ಲ. ಆದರೆ ಈ ನವವಧು ಮಾತ್ರ ಭಾರತ್ ಬಂದ್ ನಿಂದ ಪಡಬಾರದ ಕಷ್ಟ ಅನುಭವಿಸಿದ್ದಾಳೆ.