ಬೆಂಗಳೂರು :ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡಿ ಸಂಕಷ್ಟ ಎದುರಾಗಿದೆ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಸಿಐಆರ್ ದಾಖಲಿಸಿಕೊಂಡ ಬೆನ್ನಲ್ಲೇ
ಸಿಎಂ ಪತ್ನಿ ಪಾರ್ವತಿಯವರು 14 ನಿವೇಶನ ಗಳ ಕ್ರಯ ಪತ್ರವನ್ನು ವಾಪಸ್ ನೀಡುವುದಾಗಿ ಮೂಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ನಿರ್ಧಾರ ಸ್ಪೋಟಕ ತಿರುವಿಗೂ ಕಾರಣವಾಗಿದೆ.
ಮೈಸೂರಿನ ವಿಜಯನಗರದಲ್ಲಿ ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಈ ಒಂದು ನಿವೇಶನಗಳು ಇವೆ. ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ ‘ED’ ಪ್ರಕರಣ ದಾಖಲು
ಹಾಗಾಗಿ 14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಪತ್ನಿ ಪಾರ್ವತಿ ಹೇಳಿರುವ ನಿರ್ಧಾರ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.