ಕಲಾವತಿ ಪ್ರಕಾಶ್
ಬೆಂಗಳೂರು
ಚನ್ನಕೃಷ್ಣಪ್ಪ ನಾಯಕ ೧೧ನೆ ಶತಮಾನದಲ್ಲಿ ಸ್ಥಾಪಿಸಿದ
ಸಿಂಹಾಸನಪುರದ ಸಂಕ್ಷಿಪ್ತ ರೂಪ ಹಾಸನ ಹೆಸರಾಗಿದೆ
ಹಾಸನಾಂಬೆ ದೇವಿಯ ಹೆಸರು ಎಂಬ ಪ್ರತೀತಿ ಇದೆ
ಇದು ವೀರ ಅರ್ಜುನನ ಮೊಮ್ಮಗನಿಗೆ ಸಂಬಂಧಿಸಿದೆ
ಹೊಯ್ಸಳ ಮೌರ್ಯ ಗಂಗ ಚಾಲುಕ್ಯ ರಾಷ್ಟರಕೂಟರು
ಚೋಳರು ವಿಜಯನಗರ ಮೈಸೂರರಸರು ಆಳಿದರು
ಹಾಸನ ಜಿಲ್ಲೆ ಹೊಯ್ಸಳ ವಾಸ್ತು ಶಿಲ್ಪಕೆಗಳ ನಾಡಾಗಿದೆ
ಮಲೆನಾಡ ಹೆಬ್ಬಾಗಿಲು ಬಡವರ ಊಟಿಯೆ ಇದಾಗಿದೆ
ಹಾಸನದೆಲ್ಲೆಡೆ ೮೦೦ ಕ್ಕೂ ಹೆಚ್ಚು ಶಾಸನ ದೊರೆತಿವೆ
ಮರಾಠಿ ಕನ್ನಡ ಸಂಸ್ಕೃತ ತಮಿಳು ಮಾರವಾಡಿ
ಮಹಾಜನಿಯಂತಹ ಭಾಷೆಗಳಲ್ಲಿದ್ದು ಕರ್ನಾಟಕದ
ಇತಿಹಾಸ ತಿಳಿಯಲು ಬಹಳ ಸಹಕಾರಿಯಾಗಿವೆ
ಹಾಸನ ಅರಸೀಕೆರೆ ಅರಕಲಗೂಡು ಬೇಲೂರು
ಚನ್ನರಾಯಪಟ್ಟಣ ಹೊಳೇನರಸೀಪುರ ಸಕಲೇಶಪುರ
ಶಾಂತಿಗ್ರಾಮ ಕೋಣನೂರು ಆಲೂರು ತಾಲ್ಲೂಕುಗಳು
ಕಾಫಿ ಮೆಣಸು ಆಲೂಗಡ್ಡೆ ಭತ್ತ ಕಬ್ಬು ಇಲ್ಲಿನ ಬೆಳೆಗಳು
ಆಲೂರಿನ ವಾಟೆಹೊಳೆ ಬೇಲೂರಿನ ಯಗಚಿ
ಗೊರೂರು ಅಣೆಕಟ್ಟು ಇಲ್ಲಿನ ಜಲಾಶಯಗಳು
ಹಾಸನದ ಹವಾಗುಣ ಬೆಚ್ಚನೆಯ ಮುಂಜಾನೆ
ತಂಪಾದ ಕೊರೆಯುವ ಚಳಿಯ ಸಂಜೆಗಳು
ಬೇಲೂರು ಹಳೇಬೀಡು ಶ್ರವಣಬೆಳಗೊಳ ಜೈನಮಠ
ಪಾರ್ವತಮ್ಮ ಬೆಟ್ಟ ಹುಲಿಕೆರೆ ಕೊಳ ಬಿಸಿಲೆಘಾಟ್
ಈಶ್ವರ ದೇವಸ್ಥಾನ ಲಕ್ಷ್ಮಿದೇವಿ ಗುಡಿ ಕೇದಾರೇಶ್ವರ
ಶೆಟ್ಟಿಹಳ್ಳಿ ಚರ್ಚ್ ಗಳು ಪ್ರಸಿದ್ಧ ಪ್ರವಾಸಿ ತಾಣಗಳು
ಬೇಲೂರ ಚನ್ನಕೇಶವ ಹಳೆಬೀಡ ಹೊಯ್ಸಳೇಶ್ವರ
ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪ ಕಲೆ ಹೊಯ್ಸಳ ವಾಸ್ತಶಿಲ್ಪದ ಬೀಡು ಬಳಪದ ಕಲ್ಲಿನದು
ಪ್ರಪಂಚದಲ್ಲೇ ಪ್ರಸಿದ್ಧ ಕಲೆಯ ಕೆತ್ತನೆ ಇಲ್ಲಿಹುದು
ಷಟ್ಪದಿ ಬ್ರಹ್ಮ ರಾಘವಾಂಕ ರಗಳೆಯ ಕವಿ ಹರಿಹರ
ನೇಮಿಚಂದ್ರರು ಬೆಲೂರ ಕೇಶವದಾಸರು ಹಾಗೂ
ಜಾನಪದ ಜಂಗಮ ಎಸ್ ಕೆ ಕರೀಂಖಾನ್ ಕವಿಗಳು
ಕುಮಾರ ಗಂದರ್ವ ಎಸ್ ವಿ ರಂಗಣ್ಣ ಶಾಂತರಸರು
- ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ