ಕಲಾವತಿ ಪ್ರಕಾಶ್.
ಬೆಂಗಳೂರು.
ಬಾಗದೇಶ,ಬಾಗಡಿಗ ನಾಡೆಂದು
ಸಾರಿ ಸಾರಿ ಹೇಳುತಿವೆ ಶಾಸನಗಳು
ಬಾದಾಮಿ ಐಹೊಳೆ ಪಟ್ಟದಕಲ್ಲು
ಮೇಣಬಸದಿ ಮಹಾಗುಡ್ಡಗಳು
ಬಾಗಲಕೋಟೆ ಬಾದಾಮಿ ಚಾಲುಕ್ಯರಾಳಿದ ನಾಡು
ಶಿಲ್ಪ ಕಲೆ ವಾಸ್ತು ಶಿಲ್ಪದ ಈ ಬೀಡು
ಕಾವೇರಿಯಿಂದ ನರ್ಮದೆಯವರೆಗಿದ್ದಂಥ
ವಿಶಾಲ ಸಾಮ್ರಾಜ್ಯ ನೀ ನೋಡು
ಗುಹಾಂತರ ದೇವಾಲಯ ಜೈನ ಬಸದಿ
ಬೌದ್ಧ ನೆಲೆಗಳಿವೆ ಇಲ್ಲೂ
ನಂದ ಕದಂಬರ ಚಾಲುಕ್ಯ ಗುಪ್ತರ
ಪಟ್ಟಾಭಿಷೇಕದ ಪಟ್ಟದಕಲ್ಲು
ಬನಶಂಕರಿ ಗುಡಿ ಬಾದಾಮಿ
ಶೈವ ವೈಷ್ಣವ ಜೈನರ ಬಸದಿಗಳ
ಶರಣ ಸಂಪ್ರದಾಯದ ಕೂಡಲಸಂಗಮ
ವಿಶ್ವ ಗುರು ಬಸವಣ್ಣನವರು ಐಕ್ಯವಾದ ಸ್ಥಳ
ಕನ್ನಡ ಕವಿ ರತ್ನ “ರನ್ನರ” ಹುಟ್ಟೂರು
ಬಳಗಲಿ ಕೂಡ ಬಾಗಲಕೋಟೆ
ಸಮಕಾಲಿನ ಸಾಹಿತ್ಯದ ಸಾಹಿತಿಗಳನೇಕರಿಗೆ
ಜನ್ಮದೂರೂ ಈ ಪೇಟೆ
ಸಾಹಿತ್ಯ ಕ್ಷೇತ್ರದಲ್ಲಿ ಸತ್ಯಾನಂದ ಪತ್ರೋಡರು
ಕಾದಂಬರಿಗಾರ್ತಿ ರೇಖಾ ಕಾಖಂಡಕಿ
ಪ್ರಕಾಶ್ ಖಾಡೆ,ಹಿರೇಮಠರು
ಜಾನಪದದ ವೀರೇಂದ್ರ ಬಡಿಗೇರು
ಭಾರತೀಯ ಸೇನೆಗೆ ಮೊದಲಿಗೆ ಸೇರಿಕೊಂಡಿತು
ಶ್ವಾನ ಅದು ಬಾಗಲಕೋಟೆ ಮುಧೋಳ್ ತಳಿ
ಪುನರ್ವಸತಿ ನಗರಗಳಲ್ಲಿ ಮಾದರಿ
ನಗರವೇ ಬಾಗಲಕೋಟೆ ನೀ ತಿಳಿ
ಸಂಸ್ಕೃತಿಯ ರಾಯಭಾರಿ ಇಳಕಲ್ ಸೀರಿ
ಗುಳೇದಗುಡ್ಡದ ಕುಪ್ಪಸದ ಚಂದದ ಖಣ
ರಬಕವಿ ಬನವಾಸಿ ಕೈಮಗ್ಗ, ಅಮಿನಗಡದ
ಕರದಂಟು ತಿನ್ನಲು ಸಿಕ್ಕೀತು ಇದ್ದರೆ ಮಾತ್ರ ಋಣ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು