February 21, 2026

Newsnap Kannada

The World at your finger tips!

couple

ದುರಂತಕ್ಕೆ ಕಾರಣವಾಗಿದ್ದು ವಧುವಿನ ಹೈ ಹೀಲ್ ಸ್ಲಿಪ್ಪರ್, ಭಾರದ ಉಡುಗೆ

Spread the love

ತಲಕಾಡು ಬಳಿ ಕಾವೇರಿ ನದಿ ನೀರಿನಲ್ಲಿ ಜಲ ಸಮಾಧಿಯಾದ ಪ್ರಕರಣಕ್ಕೆ ಒಂದೊಂದೇ ಕಾರಣಗಳು ಬೆಳಕಿಗೆ ಬರುತ್ತಿದೆ.

ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ವೇಳೆ ವಧು-ವರರು ದುರಂತ ಘಟನೆಗೆ ʻವಧು ಶಶಿಕಲಾ ಧರಿಸಿದ್ದ ಹೈ ಹೀಲ್‌ ಸ್ಲಿಪ್ಪರ್‌ ಹಾಗೂ ಭಾರದ ಉಡುಗೆಯೇ ಕಾರಣʼ ಎಂದು ದುರಂತದ ಸ್ಥಳದಲ್ಲಿ ಎಲ್ಲವನ್ನೂ ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ವಧು-ವರರಾದ ಶಶಿಕಲಾ ಮತ್ತು ಚಂದ್ರು ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ಗಾಗಿ ತಲಕಾಡಿನ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ಆಸೆಯಿಂದ ತೆಪ್ಪ ಹತ್ತಿದರು.

ತೆಪ್ಪದ ಮೇಲೆ ಕುಳಿತುಕೊಳ್ಳಲು ಶಶಿಕಲಾ ಮುಂದಾದರು. ಆ ವೇಳೆ ಟೈಟಾನಕ್ ಹಗ್ಗ್ ನಲ್ಲೇ ಸ್ನ್ಯಾಪ್ ಬೇಕು ಎಂದು ಕೇಳಿ ನಿಂತುಕೊಳ್ಳಲು ಹೋದರು ಆ ವೇಳೆ ಧರಿಸಿದ್ದ ಹೈ ಹೀಲ್‌ ‌ ಚಪ್ಪಲಿ ಸ್ಲಿಪ್‌ ಆಗಿದೆ. ಭಾರವಾದ ಉಡುಗೆಯಿಂದ ತೆಪ್ಪ ಒಂದೇ ಕಡೆ ಮಗುಚಿದೆ. ಈಜುಬಾರದ ಚಂದ್ರು ಮತ್ತು ಶಶಿಕಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ನಡುವೆ ಪ್ರಕರಣದ‌ ತನಿಖೆ ಕೂಡ ಚುರುಕುಗೊಂಡಿದೆ.

error: Content is protected !!