ದುರಂತಕ್ಕೆ ಕಾರಣವಾಗಿದ್ದು ವಧುವಿನ ಹೈ ಹೀಲ್ ಸ್ಲಿಪ್ಪರ್, ಭಾರದ ಉಡುಗೆ

Team Newsnap
1 Min Read

ತಲಕಾಡು ಬಳಿ ಕಾವೇರಿ ನದಿ ನೀರಿನಲ್ಲಿ ಜಲ ಸಮಾಧಿಯಾದ ಪ್ರಕರಣಕ್ಕೆ ಒಂದೊಂದೇ ಕಾರಣಗಳು ಬೆಳಕಿಗೆ ಬರುತ್ತಿದೆ.

ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ವೇಳೆ ವಧು-ವರರು ದುರಂತ ಘಟನೆಗೆ ʻವಧು ಶಶಿಕಲಾ ಧರಿಸಿದ್ದ ಹೈ ಹೀಲ್‌ ಸ್ಲಿಪ್ಪರ್‌ ಹಾಗೂ ಭಾರದ ಉಡುಗೆಯೇ ಕಾರಣʼ ಎಂದು ದುರಂತದ ಸ್ಥಳದಲ್ಲಿ ಎಲ್ಲವನ್ನೂ ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ವಧು-ವರರಾದ ಶಶಿಕಲಾ ಮತ್ತು ಚಂದ್ರು ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ಗಾಗಿ ತಲಕಾಡಿನ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ಆಸೆಯಿಂದ ತೆಪ್ಪ ಹತ್ತಿದರು.

ತೆಪ್ಪದ ಮೇಲೆ ಕುಳಿತುಕೊಳ್ಳಲು ಶಶಿಕಲಾ ಮುಂದಾದರು. ಆ ವೇಳೆ ಟೈಟಾನಕ್ ಹಗ್ಗ್ ನಲ್ಲೇ ಸ್ನ್ಯಾಪ್ ಬೇಕು ಎಂದು ಕೇಳಿ ನಿಂತುಕೊಳ್ಳಲು ಹೋದರು ಆ ವೇಳೆ ಧರಿಸಿದ್ದ ಹೈ ಹೀಲ್‌ ‌ ಚಪ್ಪಲಿ ಸ್ಲಿಪ್‌ ಆಗಿದೆ. ಭಾರವಾದ ಉಡುಗೆಯಿಂದ ತೆಪ್ಪ ಒಂದೇ ಕಡೆ ಮಗುಚಿದೆ. ಈಜುಬಾರದ ಚಂದ್ರು ಮತ್ತು ಶಶಿಕಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ನಡುವೆ ಪ್ರಕರಣದ‌ ತನಿಖೆ ಕೂಡ ಚುರುಕುಗೊಂಡಿದೆ.

Share This Article
Leave a comment