February 18, 2026

Newsnap Kannada

The World at your finger tips!

WhatsApp Image 2023 05 13 at 7.11.13 PM

ವಿದ್ಯುತ್ ದರ ಕಡಿಮೆ ಆಗಲ್ಲ – ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ

Spread the love

ಬೆಂಗಳೂರು: ವಿದ್ಯುತ್ ದರ ದಿಢೀರ್ ಹೆಚ್ಚಳದಿಂದಾಗಿ ರಾಜ್ಯದ ಜನರು ತತ್ತರಿಸಿದ್ದಾರೆ ಈ ನಡುವೆ ವಿದ್ಯುತ್ ದರ ಕಡಿಮೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ಧರಾಮಯ್ಯ ಜನತೆಗೆ ಬಿಗ್ ಶಾಕ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿಎಂ ಅವರು, ವಿದ್ಯುತ್ ದರ ಕಡಿಮೆ ಆಗಲ್ಲ. 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದರು.

ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸರಿಯಾಗಿ ಬರುತ್ತದೆ. ಅಲ್ಲಿಯವರೆಗೆ ಕಾದು ನೋಡಿ ಎಂದರು.

ವಿದ್ಯುತ್ ದರ ಏರಿಕೆ ಖಂಡಿಸಿ ಎಫ್ ಕೆ ಸಿಸಿಐ ಪ್ರತಿಭಟನೆ ವಿಚಾರವಾಗಿ ಮಾತನಾಡಿದಂತ ಅವರು, ಎಫ್ ಕೆ ಸಿಸಿಐ ಜೊತೆಗೆ ಮಾತನಾಡಿ, ಚರ್ಚಿಸುವುದಾಗಿ ತಿಳಿಸಿದರು.ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ರಂದು ಕರ್ನಾಟಕ ಬಂದ್

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಸಂಬಂಧ ಅಕ್ಕಿ ಹೊಂದಾಣಿಕೆಯಲ್ಲಿ ಸರ್ಕಾರ ತೊಡಗಿದೆ. ರಾಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಇದೆ. ಪ್ರತಿ ಕೆಜಿಗೆ 55 ರೂಪಾಯಿ, ಎಫ್ ಸಿಐ ಪ್ರತಿ ಕೆಜಿಗೆ 36.60 ದರ ನಿಗದಿಯಲ್ಲಿ ಕೊಡಲು ಹೇಳಿತ್ತು. ಸೋನಾ ಮಸೂರಿ ಅಕ್ಕಿಯನ್ನು ಕೊಡಲು ಸಾದ್ಯವೆ ಎಂದು ಹೇಳಿದರು.

error: Content is protected !!