ಹಾಸನ ಮಾದರಿಯಲ್ಲಿ ಮಂಡ್ಯದಲ್ಲೂ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವೆ. ಅಥವಾ ಸುಮಲತಾ ಕಣಕ್ಕೆ ಇಳಿದರೆ ಸಾಮಾನ್ಯ ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ ಎಂದು ಹೇಳುವುದರ ಮೂಲಕ ಮಂಡ್ಯದಿಂದ ತಮ್ಮ ಸ್ಪರ್ಧೆಯನ್ನು ಸಾರಾಸಗಟಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಈ ಬಾರಿ ಸುಮಲತಾ ಬೇಕಾದರೆ ಮಂಡ್ಯದಿಂದ ಸ್ಪರ್ಧೆ ಮಾಡಲಿ. ನಾನು ಸ್ಪರ್ಧೆ ಮಾಡುವೆ ಎಂದು ಹೇಳಿಲ್ಲ. ಒಂದು ವೇಳೆ ಸುಮಲತಾ ಸ್ಪರ್ಧಿಸಿದರೆ ನಾನು ಸಾಮಾನ್ಯ ರೈತ ಮಹಿಳೆ ಅಥವಾ ಹಾಸನ ಮಾದರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸುವೆ ಎಂದರು.
ಸುಮಲತಾ ಅವರಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ. ಅವರಷ್ಟು ಸಾಧನೆ ಮಾಡದೇ ಇರುವುದರಿಂದ ಅವರ ಸವಾಲನ್ನು ನಿರಾಕರಣೆ ಮಾಡುವೆ ಎಂದರು.
ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟನೆಗೆ ಅವಸರ ಏಕೆ ? ನಾಳೆ ಮಾಡೋಣ ಎಂದು ಹೇಳಿದರು.ಇದನ್ನು ಓದಿ –ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ – ಶಿಗ್ಗಾಂವ್ ನಿಂದ ಸ್ಪರ್ಧೆ ?
- ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ
- SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ
- ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು
- ನಾಳೆ ( May 9 ) SSLC ಫಲಿತಾಂಶ ಪ್ರಕಟ
- ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!