February 22, 2026

Newsnap Kannada

The World at your finger tips!

ashok jayaram mandya bjp

ಅಶೋಕ್ ಜಯರಾಂ

ಎಸ್ ಡಿ ಜಯರಾಂ ಪುತ್ರ ಅಶೋಕ್ ಜಯರಾಂಗೆ ಬಿಜೆಪಿ ಟಿಕೆಟ್ – ಮಂಡ್ಯದ ಯಂಗ್ ಐಕಾನ್ ಗೆ ಮಾನ್ಯತೆ

Spread the love

ಇದೇ ಮೊದಲ ಬಾರಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ

ಮಂಡ್ಯ ಜನ ಮಾನಸದಲ್ಲಿರುವ ಮಾಜಿ ಸಚಿವ ಎಸ್ ಡಿ ಜಯರಾಂ ಮತ್ತು ಮಾಜಿ ಶಾಸಕಿ ಪ್ರಭಾವತಿ ಜಯರಾಂ ಪುತ್ರ ಅಶೋಕ್ ಜಯರಾಂ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹರ್ಷ ತಂದಿದೆ.

ಮಂಡ್ಯ ಯಂಗ್ ಐ ಕಾನ್ ಎಂದೆ ಬಿಂಬಿತವಾಗಿರುವ ಅಶೋಕ್ ಜಯರಾಂ ಈಗಾಗಲೇ ಒಕ್ಕಲಿಗರ ಸಂಘದ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಸಿದ್ದು ವಿರುದ್ಧ ಸೋಮಣ್ಣ, ಬಂಡೆ ವಿರುದ್ಧ ಸಾಮ್ರಾಟ್

ಅಲ್ಲದೇ ಜಯರಾಂ ಕುಟುಂಬಕ್ಕೆ ಜೆಡಿಎಸ್ ಸಾಕಷ್ಟು ಮೋಸ ಮಾಡಿತು ಎಂಬ ಆರೋಪಗಳಿಗೆ ಬಿಜೆಪಿ ಅಶೋಕ್ ಗೆ ಟಿಕೆಟ್ ನೀಡುವುದರ ಮೂಲಕ ಪ್ರತ್ಯುತ್ತರ ನೀಡಿದೆ. ಬಿಜೆಪಿ : 189 ಅಭ್ಯರ್ಥಿಗಳ ಪಟ್ಟಿ ರಿಲೀಸ್ – 35 ಕ್ಷೇತ್ರಗಳು ಬಾಕಿ – ಪಟ್ಟಿ ವಿವರ ಹೀಗಿದೆ

ಮಂಡ್ಯ ಜಿಲ್ಲಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಮಂಡ್ಯ – ಅಶೋಕ್ ಜಯರಾಂ
  • ಕೆ ಆರ್ ಪೇಟೆ – ಕೆಸಿ ನಾರಾಯಣಗೌಡ
  • ನಾಗಮಂಗಲ – ಸುಧಾ ಶಿವರಾಮೇಗೌಡ
  • ಮದ್ದೂರು – ಎಸ್ ಪಿ ಸ್ವಾಮಿ
  • ಶ್ರೀರಂಗಪಟ್ಟಣ – ಸಚ್ಚಿದಾನಂದ
  • ಮೇಲುಕೋಟೆ – ಡಾ ಇಂದ್ರೆಶ್ ಕುಮಾರ್
  • ಮಳವಳ್ಳಿ – ಮುನಿರಾಜ್

ಮದ್ದೂರಿನಲ್ಲಿ ಎಸ್ ಪಿ ಸ್ವಾಮಿಗೆ ಟಿಕೆಟ್ ಸಿಕ್ಕಿದೆ ಇದೇ ಮೊದಲ ಬಾರಿಗೆ ನಾಗಮಂಗಲದಲ್ಲಿ ಸುಧಾ ಶಿವರಾಮೇಗೌಡರನ್ನು ಕಣಕ್ಕೆ ಇಳಿಸಲಾಗಿದೆ.

error: Content is protected !!