January 29, 2026

Newsnap Kannada

The World at your finger tips!

police 1

ಸೊಸೆ ಜಗಳಕ್ಕೆ ಬೇಸತ್ತು ಅತ್ತೆ , ಮಗ ಆತ್ಮಹತ್ಯೆ – ಬೆಂಗಳೂರಿನಲ್ಲಿ ದುರಂತ

Spread the love

ಕಾಲುಕೆದರಿ ಜಗಳವಾಡಿದ ಸೊಸೆ ಮಾತುಗಳಿಗೆ ನೊಂದು ಅತ್ತೆ ಹಾಗೂ ಗಂಡ (ಮಗ) ಇಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್​ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್​ ಬಳಿ ನಡೆದಿದೆ.

ಶ್ರೀನಿವಾಸ್ (33) ಹಾಗೂತಾಯಿ ಭಾಗ್ಯಮ್ಮ(57) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು.ಮಂಡ್ಯದಲ್ಲಿ ಪಾಂಡಿಚೇರಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ನಾಲೆಗೆ ಈಜಲು ಹೋಗಿ ಸಾವು

ಮೃತ ಶ್ರೀನಿವಾಸ್​ ಕೆಲ ದಿನಗಳ ಹಿಂದೆಯಷ್ಟೇ ಊರಿಂದ ತನ್ನ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರಂತೆ. ವಯಸ್ಸಾಗಿದ್ದ ಕಾರಣ ಅಮ್ಮನನ್ನು ನೋಡಿಕೊಳ್ಳಲು ಶ್ರೀನಿವಾಸ್ ಮನೆಗೆ ಕರೆ ತಂದಿದ್ದರು ಎನ್ನಲಾಗಿದೆ.

ಆದರೆ ಅತ್ತೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಶ್ರೀನಿವಾಸ್ ಪತ್ನಿ ಮನೆಯಲ್ಲಿ ಜಗಳ ಆರಂಭಿಸಿದ್ದರಂತೆ. ಇದರಿಂದ ಮನನೊಂದಿದ್ದ ಶ್ರೀನಿವಾಸ್​ ಹಾಗೂ ಭಾಗ್ಯಮ್ಮ ಮನೆಯ ರೂಮ್​​ನಲ್ಲಿ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.


ರಾಜಗೋಪಾಲನಗರ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!