ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದ ಗಂಡನ ಕಾಲು ಕಟ್ ಮಾಡಿ ಹೆಂಡತಿ ಕೈಗೆ ನೀಡಿದ ಮಂಡ್ಯದ ಮಿಮ್ಸ್ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು ಮಾಡಿ ವಿವಾದಗಳ ಕೇಂದ್ರ ಬಿಂದು ಆಗಿದ್ದಾರೆ.
ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಶಸ್ತ್ರಚಿಕಿತ್ಸೆ ಬಳಿಕ ಕತ್ತರಿಸಿದ ಕಾಲನ್ನು ಪತ್ನಿಗೆ ಹಸ್ತಾಂತರ ಮಾಡಿದ ಘಟನೆ ಮಂಡ್ಯ ಮಿಮ್ಸ್ ನಲ್ಲಿ ನಡೆದಿದೆ.
ಗಂಡನ ಕಾಲು ಹಿಡಿದು ಅಳುತ್ತಾನಿಂತ ವೃದ್ಧೆ ಭಾಗ್ಯಮ್ಮ ಮಂಡ್ಯದ ಕೀಲಾರ ಗ್ರಾಮದವರು.
ಗ್ಯಾಂಗ್ರಿನ್ ಖಾಯಿಲೆ ತುತ್ತಾಗಿದ್ದ ಪತಿ ಪ್ರಕಾಶ್ಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು .
ಕಳೆದ ಮೂರು ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು ಶಸ್ತ್ರಚಿಕಿತ್ಸೆ ಮೂಲಕ ಕಾಲು ಕತ್ತರಿಸಿದ ಬಳಿಕ ಕಾಲನ್ನು ಪತ್ನಿ ಕೈಗೆ ನೀಡಿ ಸಿಬ್ಬಂದಿಗಳ ಎಡವಟ್ಟು ಮಾಡಿದ್ದಾರೆ.
ಮುರುಘಾ ಶಿವಮೂರ್ತಿ ವಿರುದ್ದ ಫೋಕ್ಸೊ ಪ್ರಕರಣದ 5 ನೇ ಆರೋಪಿ ವಕೀಲನ ಬಂಧನ
ಕತ್ತರಿಸಿದ ಕಾಲನ್ನು ಎಲ್ಲಾದರೂ ಮಣ್ಣು ಮಾಡುವಂತೆ ಸಿಬ್ಬಂದಿಗಳು ಭಾಗ್ಯಮ್ಮನ ಕೈಗೆ ಕೊಟ್ಟಿದ್ದಾರೆ
ದಿಕ್ಕು ತೋಚದೆ ತಬ್ಬಿಬ್ಬಾದ ಭಾಗ್ಯಮ್ಮ.ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತರು.
ಸಿಬ್ಬಂದಿಗಳೇ ಮಣ್ಣು ಮಾಡಲು ಸಾವಿರಾರು ರೂಪಾಯಿ ಹಣ ಕೇಳಿದ್ದಾರೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನ ಕತ್ತರಿಸಿದ ಕಾಲನ್ನು ಹೆಂಡತಿಯ ಕೈ ಕೊಟ್ಟು ಮಿಮ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು